Posts

Showing posts from December, 2022

ವಿಶ್ವಮಾನವ ದಿನಾಚರಣೆಯ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ.

Image
ತುಮಕೂರು, ದಿನಾಂಕ: 29.12.2022 ವಿಚಾರ ಮಂಟಪ ಸಾಹಿತ್ಯ ಬಳಗ ಮತ್ತು ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಇವರ ಜಂಟಿ ಸಹಯೋಗದಲ್ಲಿ ವಿಶ್ವಮಾನವ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ "ಕುವೆಂಪು ಸಾಹಿತ್ಯದ ಸಮಕಾಲೀನತೆ" ಎಂಬ ವಿಷಯದ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಸಂಶೋಧನಾರ್ಥಿಯಾದ  ಧನುಷ್ ಎಚ್. ಶೇಖರ್ ರವರು "ಯಾವುದೇ ಒಂದು ಸಾಹಿತ್ಯದ ಬಹುಮುಖತ್ವದ ಸತ್ವದಿಂದಾಗಿ, ಅದರ ಅಭಿವ್ಯಕ್ತಿಯ ಗ್ರಹಿಕೆ ಪ್ರತಿಯೊಬ್ಬರಿಗೂ ಭಿನ್ನ ಭಿನ್ನವಾಗಿರುತ್ತದೆ. ಸದಾ ಬದಲಾಗುವುದು ಕಾಲ-ದೇಶಗಳ ಅಭಿರುಚಿಗಳೇ ಹೊರತು ಪಠ್ಯವಲ್ಲ. ಆದ್ದರಿಂದ ಯಾವುದೇ ಪಠ್ಯವನ್ನು ಸಮಕಾಲೀನಗೊಳಿಸುವುದು ಆ ಹೊತ್ತಿನ ಓದುಗನಷ್ಟೇ. ಈ ಮಾತಿಗೆ ಕುವೆಂಪು ಅವರ ಸಾಹಿತ್ಯವೂ ಹೊರತಲ್ಲ. ಕುವೆಂಪು ಅವರ ಸಾಹಿತ್ಯವನ್ನು ಎರಡು ಮುಖ್ಯ ನೆಲೆಗಳಿಂದ ಪ್ರಸ್ತುತ ಸನ್ನಿವೇಷಕ್ಕೆ ಅನುಸಂಧಾನಿಸಲು ಪ್ರಯತ್ನಿಸುವೆ. ಮೊದಲನೆಯದು, ಅವರ ಸ್ವಾತಂತ್ರ್ಯದ ಪರಿಕಲ್ಪನೆ. ಎರಡನೆಯದು, ಅವರ   ಆಧ್ಯಾತ್ಮದ ಪರಿಕಲ್ಪನೆ. ಸ್ವಾತಂತ್ರ್ಯವೆಂಬುದು ಕೇವಲ ದೇಶಕ್ಕೆ ಯಾವುದೋ ಒಂದು ಸಮುದಾಯಕ್ಕೆ ಸಂಬಂಧಿಸಿದಲ್ಲ. ಅದು ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವದ ವಿಕಸನಕ್ಕೆ ಸಂಬಂದಿಸಿದ್ದು ಎಂಬುದು ಕವಿಯ ನಿಲುವು. ಹುಟ್ಟುತ್ತಾ ವಿಶ್ವಮಾನವರಾದ ನಾವು ಬೆಳೆಯುತ್ತಾ ಅಲ್ಪಮಾನವರಾಗುವ ಪ್ರಕ್ರಿಯೆಯನ್ನು ವಿವರಿಸುತ್ತಾ, ಈ ಪ್...

ನಮ್ಮ ಕರ್ನಾಟಕದ ಯುವ ಪ್ರತಿಭೆ ಸಂಜಯಕುಮಾರ ಬಿರಾದಾರ ಅವರು ಬಿಹಾರ ರಾಜ್ಯದ 2022ನೇ ಸಾಲಿನ “ಮಿಥಿಲಾ ಗ್ಲೋಬಲ್ ಐಕಾನಿಕ್ ಅವಾರ್ಡಗೆ” ಆಯ್ಕೆ.

Image
ಬಿಹಾರ ರಾಜ್ಯದ ದರ್ಭಾಂಗಾ ಜಿಲ್ಲೆಯ ಅಯಾಚಿ ನಗರದ 'ಯುವ ಸಂಘಟನೆಯು' ರಾಷ್ಟ್ರೀಯ ಕಾರ್ಯಕ್ರಮವೊಂದರಲ್ಲಿ ಬಿಹಾರ ಸರಿಸಾಬ ಪಾಹಿ, ಮಧುಬಾನಿಯಲ್ಲಿ ಯುವ ಸಮಾಜ ಸೇವೆಯನ್ನು ಗುರುತಿಸಿ ಇಪ್ಪತ್ತೈದು ರಾಜ್ಯಗಳ ಯುವ ಸಮಾಜ ಸೇವಕರಿಗೆ 2022 ನೇ ಸಾಲಿನ ಪ್ರತಿಷ್ಠಿತ 'ಮಿಥಿಲಾ ಗ್ಲೋಬಲ್ ಐಕಾನಿಕ್ ಅವಾರ್ಡ್' ನ್ನು ನೀಡುತ್ತಿದ್ದಾರೆ. ನಮ್ಮ ಕರ್ನಾಟಕದಿಂದ ಸಂಜಯಕುಮಾರ ಯ ಬಿರಾದಾರ ಅವರ ಸಮಾಜ ಸೇವೆಯನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ‌, ಹಾಗೂ ಇದೆ ತಿಂಗಳು 18 ರಂದು ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತಿದೆ. ಎಂದು ಎ.ಎನ್.ವಾಯ್.ಎಸ್ ನ ಸಂಸ್ಥಾಪಕರಾದ ಶ್ರೀ ವಿಕ್ಕಿಕುಮಾರ ಮಂಡಲ ಅವರು ತಿಳಿಸಿದ್ದಾರೆ. ಸಂಜಯ ಒಬ್ಬ ಎನ್.ಎಸ್.ಎಸ್ ಸ್ವಯಂಸೇವಕರಾಗಿ, ಸಮಾಜ ಸೇವಕರಾಗಿ, ಪರಿಸರ ಸ್ನೇಹಿ, ರಂಗೋಲಿ ವಿನ್ಯಾಸಕರಾಗಿ, ನಿರೂಪಕರಾಗಿ, ಯುವ ಸಂಘಟಕರಾಗಿ, ಕಲಾವಿದರಾಗಿ, ಕಾರ್ಯಕ್ರಮ ಸಂಯೋಜಕರಾಗಿ, ರಾಷ್ಟ್ರಮಟ್ಟದಲ್ಲಿ ಹಿರಿಯ ಸ್ವಯಂಸೇವಕರಾಗಿ ವಿವಿಧ ರಾಜ್ಯಗಳ ರಾಷ್ಟ್ರೀಯ ಫೋರಂಗಳ ಸಲಹಾ ಸಮಿತಿಯ ಸದಸ್ಯರಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.  ಹೀಗೆ ಹಲವಾರು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸಂಯೋಜಕರಾಗಿ, ಸದಸ್ಯರಾಗಿ ತೊಡಗಿಕೊಂಡಿದ್ದಾರೆ. ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಂಡಿದ್ದು ಶಾಲಾ ಮಕ್ಕಳಿಗೆ ಪುಸ್ತಕ, ಪೆನ್ನು, ಕ್ಯಾಪ್ ಗಳನ್ನು, ದವಸ-ಧಾನ್ಯಗಳನ್ನು ನೀಡಿದ್ದಾರೆ. ಅಂಗವಿಕಲರ ಉದ್ಯೋಗ ಮೇಳದಲ್...

ಮೌಲ್ಯ ಶಿಕ್ಷಣ ಕಮ್ಮಟಗಳು ಅಗತ್ಯ - ಶ್ರೀ ವೆಂಕಟೇಶ್ ಬಡಿಗೇರ್.

Image
ವಿಜಯನಗರ:- ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠ ಹೊಸಪೇಟೆಯಲ್ಲಿ ಆಯೋಜಿಸಿದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ವಿಜಯನಗರ ಜಿಲ್ಲಾ ಘಟಕ ಉದ್ಘಾಟನೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪುಸ್ತಕ ಲೋಕಾರ್ಪಣ ಸಮಾರಂಭ ದಲ್ಲಿ ದಿವ್ಯ ಸಾನಿಧ್ಯ ಶ್ರೀ ಮ. ನಿ. ಪ್ರ. ಜಗದ್ಗುರು ಶ್ರೀ ಬಸುಲಿಂಗ ಮಹಾಸ್ವಾಮಿಗಳು ಶ್ರೀ ವೆಂಕಟೇಶ ಬಡಿಗೇರ್ ಜಿಲ್ಲಾಧ್ಯಕ್ಷರು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ವಿಜಯನಗರ ಜಿಲ್ಲಾ ಘಟಕ ಕಾರ್ಯಕ್ರಮ ಉದ್ದೇಶಿಸಿ ಹಿಂದಿನ ಮಕ್ಕಳು ಮೌಲ್ಯ ಶಿಕ್ಷಣ ಕಮ್ಮಟಗಳು ಮಾಡುವುದು ಅಗತ್ಯವಿದೆ ಮಕ್ಕಳು ನೀತಿ ಬೋಧೆಯಿಂದ ಸುಂದರ ಸಮಾಜ ನಿರ್ಮಾಣವಾಗಲು ಸಾಧ್ಯ ಮಕ್ಕಳು ಮಕ್ಕಳಾಗಿ ಪ್ರತಿಭೆಯಿಂದ ಹೊರಹೊಮ್ಮ ಬೇಕಾಗಿದೆ ಮಕ್ಕಳು ಬಾಲ್ಯತನವನ್ನು ಸಂಭ್ರಮಿಸಿ ನಾಡಿನ ಉತ್ತಮ ಪೌರವರಾಗಿ ದೇಶಾಭಿಮಾನಿಗಳಾಗಿ ಉತ್ತಮ ಪ್ರಜೆಗಳಾಗಿ ನಾಡು ನುಡಿ ಸಂಸ್ಕೃತಿ ಕರೆ ನೀಡಿದರು.  ಶ್ರೀ ಪ್ರಹ್ಲಾದ್ ರಾವ್ ರಚಿತ ಕವನ ಸಂಕಲನ ಏನ ಬರೀಲಿ ಬಿಡುಗಡೆಗೊಳಿಸಿ ದಯಾನಂದ ಕಿನ್ನಾಳ ಉಪನ್ಯಾಸಕರು ಸಾಹಿತ್ಯ ಗಟ್ಟಿಗೊಳ್ಳುವುದರ ಬಗ್ಗೆ ಕೆಲವು ಕಿವಿಮಾತು ಮಾತನಾಡಿದರು ಮುಖ್ಯ ಅತಿಥಿಗಳು ಹಾಗೂ ಗೌರವ್ಯಾಧ್ಯಕ್ಷರು ಶ್ರೀ ಧರ್ಮನ ಗೌಡ ಮಾತನಾಡಿ ಬಾಲ್ಯದಲ್ಲಿ ಮೌಲ್ಯ ಶಿಕ್ಷಣ ಅಗತ್ಯ ಎಂದು ಹೇಳಿದರು ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ವಿಜಯಲಕ್ಷ್ಮಿ ಮೈದೂರ್ ಮಕ್ಕಳ ಕಲ್ಯಾಣ ಸಮಿತಿ ವಿಜ...

ಯಶಸ್ವಿಯಾಗಿ ನಡೆದ ಸ್ವರ್ಣ ಭೂಮಿ 'ಸಾಹಿತ್ಯ ಸಂಭ್ರಮ' ಕಾರ್ಯಕ್ರಮ.

Image
ದಿನಾಂಕ 11.12.2022 ಭಾನುವಾರ ರಂದು ಸ್ವರ್ಣಭೂಮಿ ಫೌಂಡೇಶನ್ ಕರ್ನಾಟಕ ಹಾಗೂ ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್(ರಿ) ರಾಜ್ಯ ಘಟಕ ಬೆಂಗಳೂರು ಇವರ ಸಹಯೋಗದಲ್ಲಿ ಸಾಹಿತ್ಯ ಸಂಭ್ರಮ ಉದ್ಘಾಟನೆ ಪುಸ್ತಕ ಬಿಡುಗಡೆ ವಿಶೇಷ ಉಪನ್ಯಾಸ ಪ್ರಶಸ್ತಿ ಪ್ರಧಾನ ಕವಿಗೋಷ್ಠಿ. ವಿವಿಧ ಕ್ಷೇತ್ರಗಳಲ್ಲಿ ಸಾಧಕರಿಗೆ ರಾಜ್ಯ ಮಟ್ಟದ ಶತಶೃಂಗ ಸಾಹಿತ್ಯ ಪ್ರಶಸ್ತಿ. ಸ್ವರ್ಣಭೂಮಿ ಸೇವಾರತ್ನ ಪ್ರಶಸ್ತಿ. ಹಾಗೂ ಜ್ಞಾನಜೋತಿ ರಾಜ್ಯ ಪ್ರಶಸ್ತಿ ಸಮಾರಂಭವು. ಬಿ ಎಂ ಶ್ರೀ ಪ್ರತಿಷ್ಠಾನ ಕಲಾ ಭವನ ಎರಡನೇ ಮುಖ್ಯ ರಸ್ತೆ ನರಸಿಂಹರಾಜ ಕಾಲೋನಿ, ಬೆಂಗಳೂರು ಇಲ್ಲಿ ನಡೆಯಿತು.  ಈ ಕಾರ್ಯಕ್ರಮದ ಉದ್ಘಾಟಕರಾಗಿ ೮೬ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರು ಪ್ರಸಿದ್ಧ ಸಾಹಿತಿಗಳು ಬೆಂಗಳೂರು.ಹಾಗಿರುವ ಡಾ// ದೊಡ್ಡರಂಗೇಗೌಡ ಉದ್ಘಾಟಿಸಿದರು. ಅಧ್ಯಕ್ಷತೆ ಶ್ರೀಮತಿ ಶಾಂತಿ ವಾಸು ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪುರಸ್ಕೃತ ಕವಿಯತ್ರಿ ಸಾಹಿತಿ ಹಾಗೂ ಕುಂಚ ಕಲಾವಿದೆ ಬೆಂಗಳೂರು .ವಿಶೇಷ ಉಪನ್ಯಾಸ ಡಾ. ಎಸ್ ಶ್ರೀನಿವಾಸ್ ಪ್ರಸಾದ್ ಸಾಹಿತಿಗಳ ಹಾಗೂ ಕನ್ನಡ ಉಪನ್ಯಾಸಕರು ಕೋಲಾರ ಉಪನ್ಯಾಸ ಕಾರ್ಯಕ್ರಮ ನೀಡಿದರು.  ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ .ಶ್ರೀ ಎಂಕೆ ಶೇಖ್ .ಡಾ ಆರ್ ನಾರಾಯಣಸ್ವಾಮಿ .ಶ್ರೀ ರಮೇಶ್ ಎಂ ಕಮತಗಿ .ಶ್ರೀ ಎಲ್ಲಪ್ಪ ಕರೆಯಣ್ಣವರ. ಆಗಮಿಸಿದ್ದರು ಇದೆ .ಕಾರ್ಯಕ್ರಮದಲ್ಲಿ ...

ಡಾ.ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್ ಅವರಿಗೆ ಈ ಸಾಲಿನ ಶತಶೃಂಗ ಸಾಹಿತ್ಯ ಪ್ರಶಸ್ತಿ.

Image
  ದಾವಣಗೆರೆ ಜಿಲ್ಲೆಯ ಅಡಿಕೆ ನಾಡಿನ ಮೂಲದವರಾದ ಡಾ. ಷಕೀಬ್ ಎಸ್ ಕಣದ್ಮನೆಯವರು ಸುಮಾರು ವರ್ಷಗಳಿಂದ ನಾಡು‌ನುಡಿಗಾಗಿ ದುಡಿಯುತ್ತಿದ್ದಾರೆ. ಇವರು ಕವಿ, ವಿಮರ್ಶಕ, ಲೇಖಕ, ಅಂಕಣ ಬರಹಗಾರರಾಗಿ, ಸಂಶೋಧಕರಾಗಿ ಮತ್ತು ಸಂಘಟಕರಾಗಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ *ಮೋಹದ ಮೋಡಗಳು* ಎಂಬ ಕವನ ಸಂಕಲನದ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಮೊಟ್ಟ ಮೊದಲ ಕೊಡುಗೆಯಾಗಿ ನೀಡುವುದರ ಮೂಲಕ ಪರಿಸರ ಪ್ರೇಮಿ, ರೈತಕವಿಯಾಗಿ ಗುರುತಿಸಿಕೊಂಡಿದ್ದಾರೆ.   ಅಲ್ಲದೆ ‘ಮಲೆನಾಡ ಮಧುಬಾಲೆ’. ‘ಜಾನಪದ ಬಹುಮುಖಿ ಚಿಂತನೆ’, ಎಂಬ ಕೃತಿಗಳನ್ನು ನೀಡಿದ್ದು, ಸುದ್ದಿದಿನ ಪತ್ರಿಕೆ, ವಿ ಕೆ ನ್ಯೂಸ್, ಮತ್ತು ಓದುಗದೊರೆ ಪತ್ರಿಕೆಯು ‘ದೇಸಿ’ ಎನ್ನುವ ಅಂಕಣ ಬರಹಗಳನ್ನು ಪ್ರಕಟಿಸುತ್ತಿದೆ. ‘ಕನ್ನಡ ಸಾಂಸ್ಕೃತಿಕ ಗತವೈಭವ ಅಕಾಡೆಮಿಯ ಮೂಲಕ ಕನ್ನಡ ಸಂಸ್ಕೃತಿಯನ್ನು ನಾಡಿಗೆ ಪರಿಚಯಿಸುವ ಕಾರ್ಯಕ್ರಮಗಳನ್ನು ಮಾಡುವುದರ ಜೊತೆಗೆ ಯುವ ಸಾಹಿತಿಗಳನ್ನು ಗುರುತಿಸುವ ಕಾರ್ಯ ಮಾಡುತ್ತಿದ್ದಾರೆ‌.     ಅವರ ಈವರೆಗಿನ ಅತ್ಯುತ್ತಮ ಸಾಮಾಜಿಕ ಸೇವೆಯನ್ನು ಮತ್ತು ಸಾಹಿತ್ಯ ಸೇವೆಯನ್ನು ಪರಿಗಣಿಸಿ ಈ ಸಾಲಿನ *ಶತಶೃಂಗ ಸಾಹಿತ್ಯ ರಾಜ್ಯ ಪ್ರಶಸ್ತಿಗೆ* ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಶಿಕ್ಷಕರ ಸಾಹಿತ್ಯ ಪರಿಷತ್ತಿನ ಗೌರವ ಅದ್ಯಕ್ಷರಾದ ಎಂ.ಕೆ‌.ಶೇಖ್. ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ‌. ಮಾನ್ಯರಿಗೆ ವಿಚಾರ ಮಂಟಪ ಬಳಗದ ವತಿಯಿಂದ ತುಂಬು...

ಧಾರವಾಡದ ಯುವಪ್ರತಿಭೆ ಶ್ರೀ ಸಂಜಯಕುಮಾರ ಬಿರಾದಾರ ಅವರನ್ನು ಪ್ರಶಂಸಿದ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಹಾಗೂ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಾದ ಡಾ.ಚಂದ್ರಶೇಖರ ಕಂಬಾರರು.

Image
ನಮ್ಮ ಧಾರವಾಡ ಜಿಲ್ಲೆಯ ಕರ್ನಾಟಕ ವಿಶ್ವವಿದ್ಯಾಲಯದ ಯುವಪ್ರತಿಭೆ ಶ್ರೀ ಸಂಜಯಕುಮಾರ ಯಂಕನಗೌಡ ಬಿರಾದಾರ ಅವರ ಸಾಧನೆ ಮಹೋನ್ನತವಾದದ್ದು. ಕೇವಲ ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರ ತೊಡಗದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದು ಎಲ್ಲಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕೇವಲ ತಾವಷ್ಟೇ ಹೆಮ್ಮರವಾಗಿ ಬೆಳೆದರೆ ಸಾಲದು ಅದರಿಂದ  ಸಮಾಜಕ್ಕೆ ಯಾವುದೇ ಒಳ್ಳೆ ಫಲ ಸಿಗದು ಬದಲಿಗೆ ಇಡೀ ಸಮಾಜವೇ ಹೆಮ್ಮರವಾಗಿ ಬೆಳೆದಾಗ ನಮ್ಮ ದೇಶಕ್ಕೆ ಒಂದೊಳ್ಳೆ ಉಡುಗೊರೆ ದೊರೆಯುವುದು ಎಂದು ಭಾವಿಸಿದ ಶ್ರೀ ಸಂಜಯಕುಮಾರ ಬಿರಾದಾರ ಅವರು ದೇಶದ ಸರ್ವತೋಮುಖ ಅಭಿವೃದ್ಧಿಗೆ ಸದಾ ಕಾಲ ಶ್ರಮಿಸಿದ ಇವರ ಈ ಒಂದು ಅಘಾದ ಚೈತನ್ಯಕ್ಕೆ ನಮ್ಮೆಲ್ಲರ ಹೃನ್ಮನದಿಂದ ಅನಂತ, ಅನಂತ ನಮನಗಳು.. ಸಂಜಯಕುಮಾರ ಅವರ ಎಲ್ಲಾ ಕ್ಷೇತ್ರದ ಸಾಧನೆಗಳ ಸೃಜನಾತ್ಮಕ ಕ್ರಿಯಾಶೀಲತೆಯನ್ನು ಕಂಡ ಜ್ಞಾನಪೀಠ ಪುರಸ್ಕೃತರಾದ ಚಂದ್ರಶೇಖರ ಕಂಬಾರ ಅವರು ತಮ್ಮ ಅಂತರಾಳದಿಂದ  ಶ್ರೀ ಸಂಜಯಕುಮಾರ ಬಿರಾದಾರ ಅವರಿಗೆ “ಪ್ರಶಂಸಾ ಪತ್ರ” ವನ್ನು ನೀಡುವುದರ ಜೋತೆಗೆ ಅವರ ಸಾಧನೆಯ ಸುರಿಮಳೆಯನ್ನು ಲಾಲಿತ್ಯದಿಂದ ಅಮೋಘವಾಗಿ ವರ್ಣಿಸಿದ್ದಾರೆ. ಕಲಿಕೆ ಎನ್ನುವುದು ಕೇವಲ ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವಿನ ಕೊಂಡಿಯಾಗಿರದೆ, ವಿದ್ಯಾರ್ಥಿ ಮತ್ತು ಸಮುದಾಯದ ನಡುವೆ ಸುಖಕರವಾದ ಮತ್ತು ರಚನಾತ್ಮಕವಾದ ಸಂಬಂಧ ಬೆಳೆಯಬೇಕು. ಎಂಬ ಆಶಯದೊಂದಿಗೆ ಸ್ಥಾಪಿತವಾದ ದೇಶದ ಸಮಗ್ರ ಬೆಳವಣಿಗೆಗ...