Posts

Showing posts from September, 2022

ದಸರಾ ಕವಿಗೋಷ್ಠಿಗೆ ಶ್ರೀ ರಾಜು ಸೂಲೇನಹಳ್ಳಿ ಆಯ್ಕೆ

Image
ವಿಶ್ವ ವಿಖ್ಯಾತ ಮೈಸೂರು ದಸರಾ ಉತ್ಸವದ ಪ್ರಾದೇಶಿಕ ಕವಿಗೋಷ್ಠಿಗೆ ಚಿತ್ರದುರ್ಗ ಜಿಲ್ಲೆಯ ಗ್ರಾಮೀಣ ಪ್ರತಿಭೆ ಸಾಹಿತಿಗಳು ಕಾದಂಬರಿಕಾರರು ಆಗಿರುವ ಶ್ರೀ ಎಸ್. ರಾಜು ಸೂಲೇನಹಳ್ಳಿ ಇವರನ್ನು  ಆಯ್ಕೆ ಮಾಡಲಾಗಿದ್ದು  ದಿ :01/10/2022 ರ ಶನಿವಾರದಂದು ರಾಣಿ ಬಹದ್ದೂರ್ ಸಭಾಂಗಣದಲ್ಲಿ ಕವಿಗೋಷ್ಠಿ ನಡೆಯಲಿದೆ. ಶ್ರೀಯುತರು ತಮ್ಮ ತನುಶ್ರೀ ಪ್ರಕಾಶನ ಸಂಸ್ಥೆಯ ಮೂಲಕ ಹಲವು ಸಾಹಿತ್ಯಿಕ ಮತ್ತು ಸಮಾಜೋಪಕಾರಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು, ಕರುನಾಡು ಹಣತೆ ಕವಿ ಬಳಗ ಸೇರಿದಂತೆ ಹಲವು ಸಾಹಿತ್ಯ ಸಂಸ್ಥೆಗಳನ್ನು ಮುನ್ನಡೆಸುತ್ತಿದ್ದಾರೆ  ಹಾಗೂ ಕವಿ ಲೇಖಕರಿಗೆ ಮಾರ್ಗದರ್ಶಕರಾಗಿ ಪ್ರತಿಭೆಗಳ ಬೆನ್ನುತಟ್ಟುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದಾರೆ.  ಈ ಸುಸಂದರ್ಭದಲ್ಲಿ ಶ್ರೀ ರಾಜು ಸೂಲೇನಹಳ್ಳಿ ರವರಿಗೆ ಇಂತಹಾ ಹಲವಾರು ಅವಕಾಶ, ಪ್ರೋತ್ಸಾಹ, ಪ್ರಶಸ್ತಿ ಸನ್ಮಾನಗಳು ಲಭಿಸಲಿ ಎಂದು ವಿಚಾರ ಮಂಟಪ ಸಾಹಿತ್ಯ ಬಳಗವು ಹೃದಯಪೂರ್ವಕವಾಗಿ ಹಾರೈಸಿ ಅಭಿನಂದಿಸುತ್ತದೆ.

ಚಿತ್ರದುರ್ಗ ಜಿಲ್ಲೆಯ ಸಾಧಕರಿಗೆ ನಾಡ ಪ್ರಭು ಕೆಂಪೇಗೌಡ ಸೇವಾ ರತ್ನ ರಾಷ್ಟ್ರ ಪ್ರಶಸ್ತಿಗಳು

Image
 ದಿನಾಂಕ : 25/09/2022 ಭಾನುವಾರ ಆಯೋಜನೆಗೊಂಡ ಜ್ಞಾನ ಗಂಗಾ ಸಾಹಿತ್ಯ ಮತ್ತು ಸಂಸ್ಕೃತಿಕ ರಂಗ (ರಿ) ಬೆಂಗಳೂರು ಹಾಗೂ ಕರುನಾಡ  ಹಣತೆ ಕವಿ ಬಳಗ ಮತ್ತು ಸಾಂಸ್ಕೃತಿಕ ಕಲಾತಂಡ (ರಿ) ಚಿತ್ರದುರ್ಗ ಇವರ ಸಹಯೋಗದೊಂದಿಗೆ 2022 ರ ಪ್ರಥಮ ರಾಜ್ಯ ಕರುನಾಡ ಕವಿ ಕಲಾವಿದರ ರಾಷ್ಟ್ರ ಸಮ್ಮೇಳನ ಆಯೋಜಿಸಲಾಗಿತ್ತು  ಹಾಗೂ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಸನ್ಮಾನ  ಪ್ರಧಾನ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಜಿಲ್ಲೆ,ಚಳ್ಳಕೆರೆ ತಾಲ್ಲೂಕಿನ  ಶಿವಮೂರ್ತಿ.ಟಿ ಕೋಡಿಹಳ್ಳಿ ಇವರಿಗೆ ಜಾನಪದ ಶಿಕ್ಷಣ,ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ರಾಷ್ಟ್ರ ಮಟ್ಟದ " ನಾಡ ಪ್ರಭು ಕೆಂಪೇಗೌಡ ಸೇವಾ ರತ್ನ ರಾಷ್ಟ್ರ ಪ್ರಶಸ್ತಿ " ನೀಡಿ ಗೌರವಿಸಲಾಯಿತು.. ಹಾಗೂ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಶ್ರೀಮತಿ ಸರಸ್ವತಿ ಕೆ.ನಾಗರಾಜ್ ಕವಯತ್ರಿ, ಇವರಿಗೆ ಶಿಕ್ಷಣ  ಮತ್ತು ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆ ಗುರುತಿಸಿ ಇವರಿಗೆ ರಾಷ್ಟ್ರ ಮಟ್ಟದ " ನಾಡ ಪ್ರಭು ಕೆಂಪೇಗೌಡ ಸೇವಾ ರತ್ನ ರಾಷ್ಟ್ರ  ಪ್ರಶಸ್ತಿ ನೀಡಿ ಗೌರವಿಸಲಾಯಿತು.. ಈ ಕಾರ್ಯಕ್ರಮದ ಉದ್ಘಾಟನೆ ಯನ್ನು ಶ್ರೀಯುತ ಜಗದೀಶ್ ಚೌದರಿ ಸಮಾಜ ಸೇವಕರು,ನೆಲಮಂಗಲ ಹಾಗೂ ಸಮ್ಮೇಳನ  ಅಧ್ಯಕ್ಷತೆಯನ್ನು ಶ್ರೀಯುತ ಮಣ್ಣೆ ಮೋಹನ್ ಲೇಖಕರು, ಮತ್ತು ಅಂಕಣ ಬರಹಗಾರರು ವಹಿಸಿದ್ದರು.ಇಲ್ಲಿ ವಿದ್ಯಾರ್ಥಿ ಗೋಷ್ಠಿ,...

'ಆತ್ಮಾನುಬಂಧದ ಸಖಿ' ಕೃತಿ ಲೋಕಾರ್ಪಣೆ

Image
ಬೆಂಗಳೂರು : (26.09.2022) ನಗರದ ಗಾಂಧಿ ಭವನದಲ್ಲಿಂದು ಉದಯೋನ್ಮುಖ  ಸಾಹಿತಿ ಕಲಾವಿದ  ಶ್ರೀ ರಾಘವೇಂದ್ರ ಡಿ. ತಳವಾರ ಅವರ‌ 'ಆತ್ಮಾನುಬಂಧದ ಸಖಿ' ಕವನ ಸಂಕಲನ ಬಿಡುಗಡೆ ಸಮಾರಂಭವು ನೆರವೇರಿತು. ಜ್ಞಾನಗಂಗ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗ ಬೆಂಗಳೂರು ಹಾಗೂ ಕರುನಾಡ ಹಣತೆ ಕವಿ ಬಳಗ ಇವರ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುಸ್ತಕ ಲೋಕಾರ್ಪಣೆ ಮಾಡಲಾಯಿತು.  ಈ ಕವನ ಸಂಕಲನದ ಅಪ್ರಕಟಿತ ಕೃತಿಯು ಕಳೆದ ವರ್ಷ ತುಮಕೂರಿನ ಗುರುಕುಲ ಕಲಾ ಪ್ರತಿಷ್ಠಾನವು ನೀಡುವ ಗುರುಕುಲ ಸಾಹಿತ್ಯ ಕೇಸರಿ ಎಂಬ ರಾಜ್ಯ ಪ್ರಶಸ್ತಿಯನ್ನು ಪಡೆದಿದೆ. ಪ್ರಸ್ತುತ ಯುವ ಸಾಹಿತಿಗಳು ಬೆಂಗಳೂರಿನ ಜ್ಞಾನ ದರ್ಶನ ಸಂಸ್ಥೆಯ ಅಕ್ಷರ ದಾಸೋಹ ಮಾಸಪತ್ರಿಕೆ ಪ್ರಧಾನ ಸಂಪಾದಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.  ಶ್ರೀ ಮಣ್ಣೇ ಮೋಹನ್,  ಕನಕ ಪ್ರೀತೀಶ, ಗಣಪತಿ ಗೋ. ಚಲವಾದಿ,  ಶ್ರೀ ರಾಕೇಶ್ ಎಮ್, ಗೌತಮ್ ಗೌಡ, ಶಿವಮೂರ್ತಿ ಟಿ ಕೋಡಿಹಳ್ಳಿ,  ಶ್ರೀಮತಿ ಸರಸ್ವತಿ ನಾಗರಾಜ್,  ಹಾಗೂ ಮುರುಡಿ ಗ್ರಾಮದ ಗುರು-ಹಿರಿಯರು, ಯುವ ಮಿತ್ರರು ಹಾಗೂ ಸಾಹಿತ್ಯ ಅಭಿಮಾನಿಗಳು ಹಾಜರಿದ್ದು ಕವಿಗಳಿಗೆ ಶುಭ ಹಾರೈಸಿದರು. ಪ್ರತಿಗಳಿಗಾಗಿ ಸಂಪರ್ಕಿಸಿ : 8105242732 ರಾಘವೇಂದ್ರ ಡಿ. ತಳವಾರ.

ಲೋಕಾರ್ಪಣೆಗೊಳ್ಳಲಿರುವ ಶ್ರೀ ರಾಘವೇಂದ್ರ ಡಿ. ತಳವಾರ ಅವರ 'ಆತ್ಮಾನುಬಂಧದ ಸಖಿ'.

Image
ಜ್ಞಾನಗಂಗ ಸಾಹಿತ್ಯ  ಮತ್ತು ಸಾಂಸ್ಕೃತಿಕ ರಂಗ,  ಬೆಂಗಳೂರು ಹಾಗೂ ಕರುನಾಡ ಹಣತೆ ಕವಿ ಬಳಗ & ಸಾಂಸ್ಕೃತಿಕ ತಂಡ, ಚಿತ್ರದುರ್ಗ - ಇವರ ಸಹಯೋಗದಲ್ಲಿ ರಾಜ್ಯ ಮಟ್ಟದ ಕವಿ ಕಲಾವಿದರ‌ ಸಮ್ಮೇಳನ - 2022 ನ್ನು ಬೆಂಗಳೂರಿನ ಗಾಂಧಿ ಭವನದಲ್ಲಿ 25-09-2022 ನೇ ಭಾನುವಾರದಂದು ಹಮ್ಮಿಕೊಳ್ಳಲಾಗಿದೆ.  ಕಾರ್ಯಕ್ರಮದ ಭಾಗವಾಗಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂವಾದ, ಸಾಧಕರಿಗೆ ಸನ್ಮಾನ ಮತ್ತು ಪ್ರಶಸ್ತಿ ವಿತರಣೆ, ಹಾಗೂ ಪುಸ್ತಕಗಳ ಲೋಕಾರ್ಪಣೆಯನ್ನು ಹಮ್ಮಿಕೊಳ್ಳಲಾಗಿದೆ.   ತನುಶ್ರೀ ಪ್ರಕಾಶನ ಸಂಸ್ಥೆ ಸೂಲೇನಹಳ್ಳಿ ಇವರ ಹೆಮ್ಮೆಯ ೧೦ ನೇ ಪ್ರಕಟಣೆಯಾಗಿ ಹೊರಬರುತ್ತಿರುವ  ಶ್ರೀ ರಾಘವೇಂದ್ರ ಡಿ. ತಳವಾರ ಅವರ 'ಆತ್ಮಾನುಬಂಧದ ಸಖಿ' ಎಂಬ ಕವನ ಸಂಕಲನವು ಇದೇ ವೇದಿಕೆಯಲ್ಲಿ ಲೋಕಾರ್ಪಣೆಗೊಳ್ಳಲಿದೆ. ಈ ಕವನ ಸಂಕಲನವು ತನ್ನ ಹೆಸರೇ ಸೂಚಿಸುವಂತೆ ಆತ್ಮದ ಆತ್ಮೀಯತೆಯನ್ನು ತನ್ನ ಕವನಗಳ ಮೂಲಕ ಓದುಗರ ಮನಸ್ಸನ್ನು ತಟ್ಟುತ್ತದೆ. ತಂದೆ - ತಾಯಿ, ಹಿರಿಯರು, ಬದುಕಿನ ವಿಘ್ನಗಳು, ವಿಪರ್ಯಾಸಗಳು, ಮನಸ್ಸಿಗೆ ಸುಪ್ತ ಭಾವನೆಗಳ ಅನಾವರಣ, ಭರವಸೆಯ ಬೆಳಕು, ಅನುರಾಗದ ಅಂಕುರ, ಭಾವಾದರ್ಶಗಳು,  ಸಮಾಜದ ಬಗೆಗಿನ ಸುವಿಚಾರಗಳಂತಹ ಹಲವಾರು ಭಾವ ಬರಹಗಳನ್ನು ಆತ್ಮಾನುಬಂಧದ ಸಖಿ ಪುಸ್ತಕವು ಒಳಗೊಂಡಿದೆ.  ಕಾರ್ಯಕ್ರಮವು ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯಲಿದೆ ಹಾಗೂ ಅದ...

ಯಶಸ್ವಿಯಾದ ಸ್ಪಂದನ ಸಿರಿ ವೇದಿಕೆಯ ಶತಸಾಪ್ತಾಹಿಕೋತ್ಸವ ಸಮಾವೇಷ.

Image
ಬೆಂಗಳೂರು : 18.09.2022  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ(ರಿ), ವಿಚಾರ ಮಂಟಪ ಸಾಹಿತ್ಯ ಬಳಗ, ಸುಮಂಗಲಿ ಸೇವಾಶ್ರಮ ಮತ್ತು ಮುಕ್ತಕ ಕವಿ ಪರಿಷತ್ತು, ಮೈಸೂರು. ಇವರ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ಬದುಕು ಬರಹ ಮಾಲಿಕೆಯ ರಾಜ್ಯ ಮಟ್ಟದ ಶತಸಪ್ತಾಹಿಕೋತ್ಸವ ಸಂಸ್ಕೃತಿ ಸಮಾವೇಶವನ್ನು ನಗರದ ಹೆಬ್ಬಾಳದ ಸುಮಂಗಲಿ‌ ಸೇವಾಶ್ರಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಮಾವೇಷದ ಸರ್ವಾಧ್ಯಕ್ಷರ ಸ್ಥಾನವನ್ನು ನಾಡಶ್ರೀ ಡಾ. ಬಾ. ನಂ. ಲೋಕೇಶ್ ಇವರು ವಹಿಸಿದ್ದರು. ಮುಕ್ತಕ ಕವಿ ಗೋಷ್ಠಿ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕವಿಗೋಷ್ಠಿ ಮತ್ತು 'ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಯುವಜನತೆಯ ಪಾತ್ರ' ಎಂಬ ವಿಷಯದ ಮೇಲೆ ಸಂವಾದ ಗೋಷ್ಠಿ ಹಾಗೂ ಪುಸ್ತಕಗಳ ಲೋಕಾರ್ಪಣಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.  ಕಾರ್ಯಕ್ರಮದ ಉದ್ಘಾಟನೆಯನ್ನು ಸುಮಂಗಲಿ ಸೇವಾಶ್ರಮದ ಶ್ರೀಮತಿ ಸುಶೀಲಮ್ಮನವರು ನೆರವೇರಿಸಿ ತಮ್ಮ ಉದ್ಘಾಟನಾ ಭಾಷಣದಲ್ಲಿ ಸಾಹಿತ್ಯ ಸಂಸ್ಕೃತಿಯ ಮಹತ್ವ ಮತ್ತು ಸಾಹಿತಿಗಳ ಜವಾಬ್ದಾರಿಯನ್ನು ವಿವರಿಸುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕವಿಗಳು ಮುಕ್ತಕಗಳನ್ನು ಹಾಗೂ ಕವಿತೆಗಳನ್ನು ವಾಚನ ಮಾಡಿದರು.  ಸಂವಾದ ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಹಾಸನದ ಮಹಿಳಾ ಮತ್ತು ಮಕ್ಕಳ ರಕ್ಷಣಾ ಅಧಿಕಾರಿ...

ಶ್ರೀ ಎನ್ ಪರಮೇಶ್ ಸರ್ ಅವರಿಗೆ ವಿದ್ಯಾರ್ಥಿಗಳಿಂದ ಗೌರವ ಸನ್ಮಾನ

Image
ತುಮಕೂರು : (೧೭.೦೯.೨೦೨೨) ತುಮಕೂರು ಜಿಲ್ಲಾ ಬಲಿಜ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ನಿಲಯದ ವಾರ್ಡನ್ (ಮ್ಯಾನೇಜರ್) ಶ್ರೀ ಎನ್ ಪರಮೇಶ್ ರವರಿಗೆ ಗೌರವ ಸನ್ಮಾನವನ್ನು ನೆರವೇರಿಸಿದರು. ವಿದ್ಯಾರ್ಥಿನಿಲಯದ ವಿದ್ಯಾರ್ಥಿ ಶ್ರೀ ರಾಜಶೇಖರ್ ಇವರು ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ ಮುಂದಿನ ಅಧ್ಯಯನಕ್ಕಾಗಿ ತೆರಳುತಿರುವ ಹಿನ್ನೆಲೆಯಲ್ಲಿ ಇಲ್ಲಿವರೆಗೆ ತಮ್ಮ ಅಧ್ಯಾಯನಕ್ಕೆ ಸಹಕಾರ ಹಾಗೂ ಮಾರ್ಗದರ್ಶನವನ್ನು ನೀಡಿದ ಶ್ರೀ ಪರಮೇಶ್ ಸರ್ ಅವರಿಗೆ ವಿದ್ಯಾರ್ಥಿಗಳೆಲ್ಲರ ಸಮ್ಮುಖದಲ್ಲಿ ಗೌರವ ಸನ್ಮಾನವನ್ನು ನೆರವೇರಿಸಿದರು. ಗೌರವ ಸ್ವೀಕರಿಸಿದ ಪರಮೇಶ್ ರವರು ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಧನ್ಯವಾದಗಳನ್ನು ತಿಳಸಿ ಶುಭ ಹಾರೈಸಿದರು.  ಈ ಸಂಧರ್ಭದಲ್ಲಿ ಶ್ರೀ ವೆಂಕಟೇಶ್ ಮೂರ್ತಿ (ವೆಂಕಿ), ರಾಘವೇಂದ್ರ, ರಾಜಶೇಖರ್, ನಾಗರಾಜ್,  ಲಿಖಿತ್ ಕುಮಾರ್, ವರುಣ್ ರಾಜ್ ಜಿ, ಹೇಮಂತ್, ಅಭಿ, ತೇಜ, ಪುರುಷೋತ್ತಮ, ಸಾಯಿ, ವಂಶಿ ಮುಂತಾದವರು ಹಾಜರಿದ್ದರು.  -ವರದಿ : ವರುಣ್ ರಾಜ್ ಜಿ.