Posts

Showing posts from February, 2022

ಯಶಸ್ವಿಯಾಗಿ ನಡೆದ ತನುಶ್ರೀ ಪ್ರಕಾಶನ ಸಂಸ್ಥೆ ಸೂಲೇನಹಳ್ಳಿ ವತಿಯಿಂದ ಆಯೋಜಿಸಿದ್ದ ಅಂತರ್ಜಾಲ ಆಧಾರಿತ ೧೭ ನೇ ಗೂಗಲ್ ಮೀಟ್ ಸಂವಾದ ಕಾರ್ಯಕ್ರಮ.

Image
ದಿ : ೨೦/೦೨/೨೦೨೨ ರಂದು ತನುಶ್ರೀ ಪ್ರಕಾಶನ ಸೂಲೇನಹಳ್ಳಿ ವತಿಯಿಂದ ಆಯೋಜಿಸಿದ್ದ ಅಂತರ್ಜಾಲ ಆಧಾರಿತ ಗೂಗಲ್ ಮೀಟ್ ಕಾರ್ಯಕ್ರಮ ಮತ್ತು ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು ಈ ಕಾರ್ಯಕ್ರಮ 'ಕನ್ನಡ ಸಾಹಿತ್ಯ ಉಳಿಸುವ ಮಾರ್ಗಗಳು' ಕುರಿತು ಏರ್ಪಡಿಸಿಲಾಗಿತ್ತು ಈ ವಿಷಯ ಬಗ್ಗೆ ಉಪನ್ಯಾಸ ಶ್ರೀಯುತ ನಾಗರಾಜ ವಲ್ಕಂದಿನ್ನಿ ಪ್ರಾಂಶುಪಾಲರು ಮಾತನಾಡಿ 'ಕನ್ನಡ ಸಾಹಿತ್ಯ ಎನ್ನುವುದು ಹಲವು ಶತಮಾನಗಳ ಹಿಂದೆ ಬೆಳೆದು ಬಂದಿದೆ ತನ್ನದೇ ಆದ ಇತಿಹಾಸವಿದೆ ಅಷ್ಟೇ ಅಲ್ಲದೇ ಸಾವಿರಾರು ಕವಿಗಳು ಅನೇಕ ಕೃತಿಗಳನ್ನು ರಚಿಸಿದ್ದಾರೆ ಹಾಗೂ ಕೊಡುಗೆ ಕೂಡಾ ನೀಡಿದ್ದಾರೆ ಪ್ರಸ್ತುತ ದಿನಗಳಲ್ಲಿ ನಾವೆಲ್ಲರೂ ಆದರ ಇತಿಹಾಸ ಕುರಿತು ಓದಬೇಕಿದೆ ಸಂಶೋಧನಾ ಅಧ್ಯಯನ ಮಾಡಿ ಹೊರ ತರಲು ಪ್ರಯತ್ನ ಮಾಡಬೇಕು ವಿನಹ ನಾವೇ ತಿರಸ್ಕಾರದಿಂದ ಕಾಣುವ ಮನೋಭಾವ ಇರಬಾರದು ಕನ್ನಡ ನಾಡು ನುಡಿ ಸಂಸ್ಕೃತಿ ಮತ್ತು ಆದನ್ನ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.    ಕಾರ್ಯಕ್ರಮದಲ್ಲಿ ಆಶಯ ನುಡಿ ಬಸವರಾಜ ಪೂಜಾರ್ ಕೋಡಿಹಳ್ಳಿ ಸಂಶೋಧಕರು ಮಾತನಾಡಿ ತನುಶ್ರೀ ಪ್ರಕಾಶನ ಸೂಲೇನಹಳ್ಳಿ ಕಳೆದ ವರ್ಷದಿಂದ ಸುಮಾರು ೧೭ ಗೂಗಲ್ ಮೀಟ್ ಕಾರ್ಯಕ್ರಮ ಆಯೋಜನೆ ಮಾಡಿ ಪ್ರತಿಯೊಬ್ಬ ಕವಿಗೆ ಉಪಯುಕ್ತ ಮಾಹಿತಿ ಹಂಚುವ ಮೂಲಕ ಎಸ್. ರಾಜುಕವಿ ಸೂಲೇನಹಳ್ಳಿ ಪ್ರಕಾಶಕರು ಉತ್ತಮ ನಾಡು ನುಡಿ ಬೆಳೆಸುವ ಸೇವೆ ಮಾಡುತ್ತಿದ್ದಾರೆ ಇದು ಹೆಮ್ಮೆಯ ಸಂಗತಿ ಎಂದು ಸಂಸ್ಥೆಯು ನ...

ಯಶಸ್ವಿಯಾದ ದೇಶಭಕ್ತಿ ಗೀತ ಗಾಯನ ಸ್ಪರ್ಧೆ - ಹಾಸನ

Image
ದಿ-18-02-2022ರ ಶುಕ್ರವಾರ ಹಾಸನ, ವಿದ್ಯಾನಗರದ ಕ್ರೈಸ್ಟ್ ಶಾಲೆಯಲ್ಲಿ ವಿವಿಧ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ  ಸ್ಪಂದನ ಸಿರಿ ವೇದಿಕೆ (ರಿ)ಹಾಸನ,ಇನ್ಷ್ಯುರೆನ್ಸ್ ಪುಟ್ಟೇಗೌಡರ ಟ್ರಸ್ಟ್ ಹಾಗೂ ಕ್ರೈಸ್ಟ್ ಶಾಲೆ, ವಿದ್ಯಾನಗರ, ಹಾಸನ ಇವರ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ದೇಶಭಕ್ತಿ ಗೀತಗಾಯನ ಸ್ಪರ್ಧೆ ಕಾರ್ಯಕ್ರಮ ನಡೆಸಲಾಯಿತು. ಕ್ರೈಸ್ಟ್ ಶಾಲೆಯ ಕು.ಮಹಾಲಕ್ಷ್ಮಿ,ಶುಭಶ್ರೀ,ಪೂರ್ಣಿಕಾ,ರವರ ಸುಮಧುರವಾದ ಪ್ರಾರ್ಥನೆಯೊಂದಿಗೆ ಶುಭಾರಂಭಗೊಂಡಿತು. ಸಂಸ್ಥಾಪಕ ಅಧ್ಯಕ್ಷರಾದ ಕಲಾವತಿ ಮಧುಸೂನನರವರು ಕೊರೋನದಿಂದ ಹೈರಾಣಾಗಿರುವ ವಿದ್ಯಾರ್ಥಿಗಳಿಗೆ ನಾಡುನುಡಿನೆಲಜಲ ದೇಶಭಾಷೆ, ಸಂಸ್ಕೃತಿಯ ಸ್ಮರಣೆಯಲ್ಲಿ ಚೈತನ್ಯಮೂಡಿಸಿ ಪ್ರೋತ್ಸಾಹಿಸಿ ಉತ್ಸಾಹ ತುಂಬುವ ಉದ್ದೇಶ ಈ ಕಾರ್ಯಕ್ರಮವಾಗಿದೆ. ಈ ಆಯೋಜನೆಗಾಗಿ ಸಹಕರಿಸಿದ ಎಲ್ಲರನ್ನು ಅಭಿನಂದಿಸಿರು. ಉದ್ಘಾಟನಾ ನುಡಿಯಾಡಿದ ಕ್ಯಾಪ್ಟನ್ ಜಯರಾಮ್ ರವರು ಯೋಧರನ್ನು ನಿತ್ಯ ಸ್ಮರಿಸಿ  ಮುಂಜಾನೆ ಹಾರೈಸುವ ಮೂಲಕ ನಮ್ಮ ಕೃತಜ್ಞತೆಯನ್ನು ಸಲ್ಲಿಸುವ ಪರಿಪಾಠ ಎಲ್ಲರದಾಗಬೇಕೆಂದರು.ಹಲವಾರು ಶಾಲಾ ವಿದ್ಯಾರ್ಥಿಗಳು ಅತ್ಯುತ್ತಮವಾಗಿ ದೇಶಭಕ್ತಿ ಗೀತಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದವರಲ್ಲಿ,ಶ್ರೀ ಆದಿಚುಂಚನಗಿರಿ ಕನ್ನಡ ಮಾಧ್ಯಮ ಶಾಲೆ-ಪ್ರಥಮ ಸ್ಥಾನ, ವಿದ್ಯಾ ಸೌಧ ಶಾಲೆ-ದ್ವಿತೀಯ, ವಿಜಯ ಶಾಲೆ- ತೃತೀಯ, ಕ್ರೈಸ್ಟ್ ಶಾಲೆ,ಆದಿಚುಂಚನಗಿರಿ ಆಂಗ್ಲ ಮಾಧ್ಯಮ, ಸರ್ಕಾರಿ ಪ್ರೌಢ...

ಯಶಸ್ವಿಯಾಗಿ ನಡೆದ ವಿಚಾರ ಮಂಟಪ ಪುಸ್ತಕ ಓದು ಸರಣಿ -೦೩ ಕಾರ್ಯಕ್ರಮ

Image
ದಿನಾಂಕ : 20.02.2022 ವಿಚಾರ ಮಂಟಪ ಸಾಹಿತ್ಯ ಬಳಗ, ಕರುನಾಡ ಸಾಹಿತ್ಯ ಪರಿಷತ್ತು, ಸ್ಪಂದನಸಿರಿ ಸಾಹಿತ್ಯ ವೇದಿಕೆ ಮತ್ತು ತನುಶ್ರೀ ಪ್ರಕಾಶನ ಸಂಸ್ಥೆ ಇವರ ಜಂಟಿ ಸಹಯೋಗದಲ್ಲಿ ಆನ್ ಲೈನ್ ಗೂಗಲ್ ಮೀಟ್ ಮೂಲಕ  ಪುಸ್ತಕ ಓದು ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.    ರಾಕೇಶ್ ಎಂ, ಶಿಕ್ಷಕರು ಇವರು ಸಂವಿಧಾನ ಓದು ಪುಸ್ತಕವನ್ನು ಓದುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ರಜನಿಕಾಂತ ಎಚ್. ಪಟಗಾರ ಅವರು ಕಾರ್ಯಕ್ರಮದ ನಿರೂಪಣೆ ಮತ್ತು ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.  ಕಾರ್ಯಕ್ರಮದಲ್ಲಿ ಎಚ್. ಗಂಗಾಧರನ್ ಅವರ ಬುದ್ಧ ಭಗವಾನ್  ಕೃತಿಯನ್ನು ಚರ್ಚೆಗೆ ಆಯ್ದುಕೊಂಡು ಕೃತಿಯ ವಿವಿಧ ಭಾಗಗಳನ್ನು  ಓದಿ ಸಂವಾದಿಸಲಾಯಿತು. ಸಂವಾದದಲ್ಲಿ ರಜನಿಕಾಂತ್ ಎಚ್. ಪಟಗಾರ, ಗೌತಮ್ ಗೌಡ, ಸೋಮೇಶ್ ಪ್ರಚಂಡಿ,  ಗಾಯಿತ್ರಿ ಬಿ, ಹನುಮಂತ ಕುರುಬರ, ರಾಕೇಶ್ ಎಂ, ಪ್ರತಿಮಾ ಎಚ್ ಎಸ್, ಶ್ರೀಮತಿ ಸುಮಾ ಬಸವರಾಜ ಹಡಪದ ಮುಂತಾದವರು ಪಾಲ್ಗೊಂಡಿದ್ದರು.   ಕಾರ್ಯಕ್ರಮದ ಮುಖ್ಯ ಅತಿಥಿ ಗಳಾಗಿದ್ದ  ಶ್ರೀಮತಿ ಕಲಾವತಿ ಮಧುಸೂದನ, ಶ್ರೀ ವರುಣ್ ರಾಜ್ ಜಿ., ಮುಂತಾದವರು ಪಾಲ್ಗೊಂಡಿದ್ದರು. ಬುದ್ಧನ ಬಾಲ್ಯ, ವೈರಾಗ್ಯ, ಜ್ಞಾನೋದಯ, ಬುದ್ಧನ‌ ಚಿಂತನೆಗಳ ಇಂದಿನ‌ ಪ್ರಸ್ತುತತೆ ಮುಂತಾದ ವಿಚಾರಗಳ ಕುರಿತು ಸಂವಾದ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಶ್...

ಯಶಸ್ವಿಯಾದ ಶ್ರೀ ಜಿ.ಎಸ್. ಶಿವರುದ್ರಪ್ಪನವರ ಜನ್ಮ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಕವಿಗೋಷ್ಠಿ ಕಾರ್ಯಕ್ರಮ - ವಿಚಾರ ಮಂಟಪ ಸಾಹಿತ್ಯ ಬಳಗ

Image
ದಿನಾಂಕ 06.02.2022 ರಂದು ಗೂಗಲ್ ಮೀಟ್ ಮೂಲಕ ವಿಚಾರ ಮಂಟಪ ಸಾಹಿತ್ಯ ಬಳಗದ  ವತಿಯಿಂದ, ಸ್ಪಂದನ ಸಿರಿ ವೇದಿಕೆ- ಕರ್ನಾಟಕ ಇವರ ಸಹಯೋಗದಲ್ಲಿ  ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರ  ಜಯಂತಿಯ ಅಂಗವಾಗಿ ಆನ್ಲೈನ್  ಕವಿಗೋಷ್ಠಿ ಮತ್ತು ಜಿ.ಎಸ್.ಶಿವರುದ್ರಪ್ಪನವರ ಕವಿತೆಗಳ ವಾಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ಪ್ರಾರಂಭದಲ್ಲಿ ಇಂದು ನಮ್ಮನ್ನಗಲಿದ ಲತಾ ಮಂಗೇಶ್ಕರ್ ಅವರ ಜೀವನ ಸಾಧನೆಗಳನ್ನು  ವಿವರಿಸುತ್ತಾ ಶ್ರೀ ರಾಕೇಶ್ ಎಂ. ರವರು ಲತಾಮಂಗೇಶ್ಕರ್ ಅವರಿಗೆ  ನುಡಿನಮನವನ್ನು ಸಲ್ಲಿಸಿದರು. ಮತ್ತು ಅವರ ಆತ್ಮಶಾಂತಿಗಾಗಿ ೨ ನಿಮಿಷದ ಮೌನಾಚರಣೆಯನ್ನು ಮಾಡಲಾಯಿತು.  ಶ್ರೀ ವಿಕಾಸ್ ಕನ್ನಸಂದ್ರ ರವರು ನೆರೆದಿದ್ದವರನ್ನು ಪ್ರೀತಿಯಿಂದ ಸ್ವಾಗತಿಸಿದರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಜಿ.ಟಿ.ಆರ್. ದುರ್ಗ, ಶಿಕ್ಷಕರು, ಬಂಗಾರಪೇಟೆ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಶಿವರುದ್ರಪ್ಪನವರ ಹಿರಿಮೆ ಗರಿಮೆಗಳನ್ನು ವಿವರಿಸಿ ಕನ್ನಡ ಸಾಹಿತ್ಯವನ್ನು ಬೆಳಗಿಸಿದ ಅದ್ಬುತ ಪ್ರತಿಭೆ ಶಿವರುದ್ರಪ್ಪನವರ ಹಾಗೂ ಎಲ್ಲಾ ಕನ್ನಡದ ಸಾಹಿತಿಗಳನ್ನು ನಾವು ಪ್ರತಿದಿನವೂ ನೆನೆಯುತ್ತಲೇ ಇರಬೇಕು. ಹಾಗೂ ಅವರು ಹಾಕಿಕೊಟ್ಟ ಹಾದಿಯಲ್ಲಿ ಸಾಗಬೇಕು. ಎಲ್ಲ ಕವಿ ಬರಹಗಾರರನ್ನು ಬೆನ್ನುತಟ್ಟಿ ಪ್ರೋತ್ಸಾಹಿಸುವ ಕೆಲಸ ನಮ್ಮಿಂದ ಆಗಬೇಕಿದೆ. ಇಂತಹಾ ಅವಕಾಶವನ್ನು ನೀಡುತ್ತಿರ...

ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ ಪ್ರಧಾನ ಸಂಘಟನಾ ಕಾರ್ಯದರ್ಶಿಯಾಗಿ ಶ್ರೀ ಬಿ. ಓಬಣ್ಣ ಆಯ್ಕೆ

Image
ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘ (ರಿ) ದ ವತಿಯಿಂದ ಶಾಸಕರ ಭವನದ ಮೂರನೇ ಮಹಡಿಯಲ್ಲಿ ಹಮ್ಮಿಕೊಂಡಿರುವ "ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ"ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ ರಾಜ್ಯಾಧ್ಯಕ್ಷರಾದ  ಶ್ರೀ ಡಿ. ಸಿ. ಗೋಪಿನಾಥ್ ಅವರ ಅಧ್ಯಕ್ಷತೆಯಲ್ಲಿ  ರಾಜ್ಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು  ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದ ಗಾಯತ್ರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಬಿ. ಓಬಣ್ಣ ಅವರನ್ನು ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ "ಪ್ರಧಾನ ಸಂಘಟನಾ ಕಾರ್ಯದರ್ಶಿಯಾಗಿ" ಆಯ್ಕೆ ಮಾಡಲಾಯಿತು. ಮಾನ್ಯರಿಗೆ ಹೃದಯಪೂರ್ವಕ ಅಭಿನಂದನೆಗಳು. ಶುಭಾಶಯ ಕೋರುವವರು : ಶ್ರೀ ರಾಜು ಕವಿ ಸೂಲೇನಹಳ್ಳಿ. 

ಯಶಸ್ವಿಯಾದ ಸರ್ಜೀ ಆಡಿಯೋ ಸಂಸ್ಥೆಯ ಎರಡನೇ ಸಂಚಿಕೆ ಸಂಗೀತ ಸ್ಪರ್ಧೆಯ ಕಾರ್ಯಕ್ರಮ.

Image
ಈ ದಿನ ಮೊಳಕಾಲ್ಮೂರು ಟೌನ್ ನಲ್ಲಿ ದ್ವಿತೀಯ ಸಂಗೀತ ಸ್ಪರ್ಧೆ ಕಾರ್ಯಕ್ರಮ ಸರ್ಜೀ ಆಡಿಯೋ ಸಂಸ್ಥೆಯ ಸಂಸ್ಥಾಪಕರು ಆದ ಸಂತೋಷ್ ಉಡೇವು ಅವರ ಸಾರಥ್ಯದಲ್ಲಿ ಆಯೋಜನೆ ಮಾಡಲಾಗಿತ್ತು  ಈ ಕಾರ್ಯಕ್ರಮದಲ್ಲಿ ಉಧ್ಘಾಟನೆ ಶ್ರೀಯುತ ಉಮೇಶ್ ಸಬ್ ಇನ್ಸ್‌ಪೆಕ್ಟರ್ ಮೊಳಕಾಲ್ಮೂರು ಟೌನ್ ನೇರವೇರಿಸಿದರು ಹಾಗೂ ಮುಖ್ಯ ಅತಿಥಿಗಳಾಗಿ ಡಾ. ಅಭಿನವ್ ವೈದ್ಯಾಧಿಕಾರಿಗಳು, ಶ್ರೀಯುತ ಶ್ರೀರಾಮುಲು ನಿಕಟ ಪೂರ್ವ ಪ್ರಧಾನ ಕಾರ್ಯದರ್ಶಿ ಕನ್ನಡ ಸಾಹಿತ್ಯ ಪರಿಷತ್ ಮೊಳಕಾಲ್ಮೂರು, ಭಾಗವಹಿಸಿದ್ದರು ಕಾರ್ಯಕ್ರಮದ ದಿವ್ಯ ಸಾನಿಧ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಸಿದ್ದಯ್ಯನಕೋಟೆ ವಹಿಸಿದ್ದರು. ನಂತರ ಕಾರ್ಯಕ್ರಮದ ಅಧ್ಯಕ್ಷತೆ ಶ್ರೀಯುತ ತಿರುಮಲೇಶ್ ವಹಿಸಿದ್ದರು. ತಮ್ಮ ಉಧ್ಘಾಟನ ನುಡಿಗಳಲ್ಲಿ ಉಮೇಶ್ ಸರ್ ಅವರು ನಶಿಸಿ ಹೋಗುತ್ತಿರುವ ಕಲಾವಿದರ ಬದುಕು ಹಾಗೂ ಪ್ರಸ್ತುತ ವಿದ್ಯಮಾನ ಪ್ರಭಾವ ಮರೆಯಾಗುತ್ತಿರುವ ಕಲೆ ಕುರಿತು ಸಂಕ್ಷಿಪ್ತವಾಗಿ ನುಡಿದರು. ಪ್ರಾಸ್ತಾವಿಕವಾಗಿ ಕೆ. ಓ. ಶಿವಣ್ಣ ಸಂಗೀತ ಶಿಕ್ಷಕರು ತುಮಕೂರ್ಲಹಳ್ಳಿ ಇವರು ಮಾತನಾಡಿ ಸಂಗೀತ ಬೆಳೆದು ಬಂದ ಹಾದಿ ಆದರ ತುಡಿತ ನಿರಂತರ ಅಭ್ಯಾಸ ಸತತ ಪರಿಶ್ರಮ ಬಗ್ಗೆ ಮನವರಿಕೆ ಆಗುವ ಹಾಗೇ ತಿಳಿ ಹೇಳಿದರು. ಶ್ರೀ ಬಸವ ಲಿಂಗ ಮಹಾಸ್ವಾಮಿಗಳು ಸರ್ವರಿಗೂ ಆಶೀರ್ವದಿಸಿ ಸಂಸ್ಥೆ ಬಗ್ಗೆ ಉತ್ಸಾಹ ಕೊಂಡಾಡಿದರು.  ಈ ಕಾರ್ಯಕ್ರಮದಲ್ಲಿ ತೀರ್ಪುಗಾರರು ಆಗಿ ಎಸ್. ರಾಜುಕವಿ ಸೂಲೇನಹಳ್ಳಿ ಕ...