Posts

Showing posts from January, 2023

ಶ್ರೀಮತಿ ಆಶಾರಾಣಿ ಎನ್ ಇವರಿಗೆ ವೃತ್ತಿಸೇವಾ ಗೌರವ ಪುರಸ್ಕಾರ.

Image
ಬೆಂಗಳೂರು ಗ್ರಾಮಾಂತರ: ದಿ. 31.01.2023  ಜಿಲ್ಲೆಯ ವಿಜಯಪುರ ಪಟ್ಟಣದ ರೋಟರಿ ಸಂಸ್ಥೆಯ ವತಿಯಿಂದ ವೃತ್ತಿಸೇವಾ ಪುರಸ್ಕಾರ ಪ್ರಧಾನ ಸಮಾರಂಭವು ನೆರವೇರಿತು. ಕಾರ್ಯಕ್ರಮದಲ್ಲಿ ಸುಗಟೂರು ಗ್ರಾಮದ ಶುಶ್ರೂಷಕಿ ಶ್ರೀಮತಿ ಆಶಾರಾಣಿ ಎನ್ ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ರೋಟರಿ ಸಂಸ್ಥೆಯು ಇವರಿಗೆ ವೃತ್ತಿಸೇವಾ  ಪುರಸ್ಕಾರವನ್ನು ಕೊಟ್ಟು ಗೌರವಿಸಿದೆ.  ಶ್ರೀಮತಿ ಆಶಾರಾಣಿ ರವರು ಜಂಗಮಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಲವು ವರ್ಷಗಳಿಂದ ಶುಶ್ರೂಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಇವರ ಸೇವಾ ಮನೋಭಾವದಿಂದ ಸುತ್ತಮತ್ತಲ ಗ್ರಾಮಗಳಲ್ಲಿ ಮನೆಮಾತಾಗಿದ್ದಾರೆ.  ಇದೇ ಸಂದರ್ಭದಲ್ಲಿ ಡಾ ಮುರಳೀಧರ, ಶ್ರೀ ವಿ ಕೃಷ್ಣಪ್ಪ, ಶ್ರೀ ಡಿ ಮಹೇಶ್, ಶ್ರೀ ಎಂ ಮಂಜುನಾಥ್ ಮುಂತಾದವರಿಗೂ ಸಹ ವೃತ್ತಿಸೇವಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು.  ವಿಜಯಪುರ ರೋಟರಿ ಸಂಸ್ಥೆಯ ಅಧ್ಯಕ್ಷರಾದ ರೋ. ಹೆಚ್.ಎಸ್. ರುದ್ರೇಶಮೂರ್ತಿ, ಶ್ರೀಮತಿ ರೋ. ಡಾ ಎಲಿಜಬೆತ್ ಚೆರಿಯನ್ ಪರಮೇಶ್, ಶ್ರೀ ರೋ. ಎ ಎಂ ಲಕ್ಷ್ಮೀನಾರಾಯಣ್, ಶ್ರೀ ರೋ. ಎನ್ ಎನ್ ಮಂಜುನಾಥ್ ರೆಡ್ಡಿ ಮುಂತಾದ ಗಣ್ಯರು ಹಾಗೂ ವಿಜಯಪುರ  ಪಟ್ಟಣದ ನಾಗರೀಕರು ಉಪಸ್ಥಿತರಿದ್ದರು.

ಶ್ರೀ ಮೂಡಲಪ್ಪ ಆದೋನಿ ಕಂಪ್ಲಿ ರವರಿಗೆ ಶ್ರೀ ಸುಬುಧೇಂದ್ರ ತೀರ್ಥ ಶ್ರೇಷ್ಠ ಕೃಷಿ ಸೇವಾ ರತ್ನ ರಾಜ್ಯ ಮಟ್ಟದ ಪ್ರಶಸ್ತಿ

Image
ಶ್ರೀ ಮೂಡಲಪ್ಪ ಆದೋನಿ ಕಂಪ್ಲಿ ರವರಿಗೆ ಕೃಷಿ ಕ್ಷೇತ್ರದಲ್ಲಿನ ಅಮೋಘ ಸೇವೆ,ಸಾಹಿತ್ಯ ಸೇವೆ,ಕನ್ನಡ ನಾಡು-ನುಡಿಯ ಬಗ್ಗೆ ಇರುವ ವಿಶೇಷ ಕಾಳಜಿ ಗುರುತಿಸಿ ಹಾವೇರಿ ಜಿಲ್ಲೆಯ ಹೊಸರತ್ತಿಯ ಶ್ರೀ ಶ್ರೀ ಡಾ.ಸುಬುಧೇಂದ್ರ ತೀರ್ಥ ವಿದ್ಯಾ ಸಂಸ್ಥೆಯು ಶ್ರೀಯುತರನ್ನು ಶ್ರೀ ಸುಬುಧೇಂದ್ರ ತೀರ್ಥ ಶ್ರೇಷ್ಠ ಕೃಷಿ ಸೇವ ರತ್ನ ರಾಜ್ಯ ಮಟ್ಟದ ಪ್ರಶಸ್ತಿ ಗೆ ಆಯ್ಕೆಮಾಡಲಾಗಿದ್ದು, ದಿನಾಂಕ : 8-1-2023 ನೇ ಭಾನುವಾರ ಹೊಸರತ್ತಿಯ ಶ್ರೀ ಮೈಲಾರ ಮಹಾದೇವ ಸಭಾ ಭವನದಲ್ಲಿ ಶ್ರೀ ಶ್ರೀ 1008 ಡಾ.ಶ್ರೀ ಸುಬುಧೇಂದ್ರ ತೀರ್ಥ ಪಾದಂಗಳವರು ಮಂತ್ರಾಲಯ ಹಾಗೂ ಗುದ್ದಲಿಂಗೇಶ್ವರ ಮಠ ಹೊಸರಿತ್ತಿಯ ಶ್ರೀ ಶ್ರೀ ಮ.ನಿ.ಪ್ರ. ಗುದ್ದಲೀಶ್ವರ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಶ್ರೀಯುತರಿಗೆ ರಾಷ್ಟ್ರಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ವಿಜಯ ನಗರ ಜಿಲ್ಲೆಯ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ವಿಜಯನಗರ ಜಿಲ್ಲಾ ಘಟಕ ಜಿಲ್ಲಾಧ್ಯಕ್ಷರಾದ ಶ್ರೀ ವೆಂಕಟೇಶ್ ಬಡಿಗೇರ್  ಡಾ.ಮಾಂತೇಶ್ ಅಣ್ಣಿಗೇರಿ. ಬೆಳಗಾವಿ ಸಾಹಿತಿಗಳು ಮತ್ತು ಸಂಸ್ಥಾಪನ ಅಧ್ಯಕ್ಷರಾದ ಶ್ರೀ ಸಿದ್ದಲಿಂಗೇಶ್ವರ ಅಂಕಲಕೋಟಿ ಪತ್ರಿಕ ವರದಿಯಲ್ಲಿ ತಿಳಿಸಿದ್ದಾರೆ. 💐💐 ಇವರಿಗೆ ವಿಚಾರ ಮಂಟಪ ಸಾಹಿತ್ಯ ಬಳಗದ ವತಿಯಿಂದ ತುಂಬು ಹೃದಯದ ಅಭಿನಂದನೆಗಳು 💐💐

ದ್ವಿತೀಯ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯ ಮುಖ್ಯ ಅತಿಥಿಯಾಗಿ ಶ್ರೀ ವೆಂಕಟೇಶ್ ಬಡಿಗೇರ್ ಆಯ್ಕೆ

Image
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಚನ್ನರಾಯಪಟ್ಟಣ ಹಾಸನ ಜಿಲ್ಲೆ,  ಚನ್ನರಾಯಪಟ್ಟಣ ತಾಲೂಕಿನ ದ್ವಿತೀಯ ಮಕ್ಕಳ ಸಾಹಿತ್ಯ ಸಮ್ಮೇಳನ 2023 ದಿನಾಂಕ 9.1.2023 ಸೋಮವಾರ ಮತ್ತು 10.01.2023 ಮಂಗಳವಾರ ಎರಡು ದಿನಗಳ ಕಾಲ ಸರ್ಕಾರಿ ಮಾಧ್ಯಮಿಕ ಶಾಲಾ,  ಆವರಣ ಚನ್ನರಾಯಪಟ್ಟಣ ಇಲ್ಲಿ ನಡೆಯಲಿದ್ದು,  ದಿ. 9.01.2023 ರಂದು ಕವಿಗೋಷ್ಠಿ ಒಂದರಲ್ಲಿ ಮುಖ್ಯ ಅತಿಥಿ ಸ್ಥಾನದಲ್ಲಿ  ಶ್ರೀ ವೆಂಕಟೇಶ ಬಡಿಗೇರ್ ಜಿಲ್ಲಾಧ್ಯಕ್ಷರು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ವಿಜಯನಗರ ಜಿಲ್ಲಾ ಘಟಕ ಇವರು ಭಾಗವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಯುಗ ಯೋಗಿ ಜಗದ್ಗುರು ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳು, ಪೀಠಾಧ್ಯಕ್ಷರು ಆದಿಚುಂಚನಗಿರಿ ಮಹಾಸಂಸ್ಥಾನ ಮಠ. ಹಾಸನ ಜಿಲ್ಲೆ ಪರಮಪೂಜ್ಯ ಶ್ರೀ ಶಂಬುನಾಥ ಮಹಾಸ್ವಾಮಿಗಳು ಮಹಾ ಪೋಷಕರು ಮಕ್ಕಳ ಸಾಹಿತ್ಯ ಪರಿಷತ್, ಕಾರ್ಯದರ್ಶಿಗಳು ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಸನ ಜಿಲ್ಲೆ. ಇವರು ಭಾಗವಹಿಸಲಿದ್ದು  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಡಾ ಸಿ ಎನ್ ಬಾಲಕೃಷ್ಣ ಶಾಸಕರು, ಶ್ರವಣಬೆಳಗೊಳ ಕ್ಷೇತ್ರ ಇವರು ವಹಿಸಲಿದ್ದು, ಟಿ. ಎಸ್.ನಾಗಾಭರಣ ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ರಾಜ್ಯ ಅಧ್ಯಕ್ಷರಾದ ಶ್ರೀ ಸಿಎಂ ಅಶೋಕ್  ಮೊದಲಾದ ಗಣ್ಯ  ಮಾನ್ಯರು ಎರಡು ದಿನ...

ಭಾವೈಕ್ಯತೆಯನ್ನು ಮೆರೆದ ನಾಮಕರಣ ಕಾರ್ಯಕ್ರಮ.

Image
ಚಿಂತಾಮಣಿ: ನಗರದ 27ನೇ ವಾರ್ಡಿಗೆ ಸೇರಿದ ಶಾಂತಿನಗರದಲ್ಲಿ ವಿನೂತನ ರೀತಿಯಲ್ಲಿ ನಾಮಕರಣ ಕಾರ್ಯಕ್ರಮ ನಡೆಯಿತಲ್ಲದೆ, ಭಾವೈಕ್ಯತೆಯನ್ನು ತೆರೆದು ಸರ್ವರ ಮೆಚ್ಚುಗೆಗೆ ಪಾತ್ರವಾಯಿತು.  ಕರುನಾಡು ಸಾಹಿತ್ಯ ಪರಿಷತ್ತಿನ ರಾಜ್ಯ ಕಾರ್ಯದರ್ಶಿ ಹಾಗೂ ಯುವ ಸಾಹಿತಿ ಕೆ ಎನ್ ಅಕ್ರಂಪಾಷ  ರವರ ಅಣ್ಣನ ಮಗಳಾದ ಎನ್ ಎ ಅರ್ಷಿಯಾ ಬಾನು ಎಂಬ ಪುಟ್ಟ ಕಂದಮ್ಮಳ ನಾಮಕರಣ ಕಾರ್ಯಕ್ರಮ ಇದಾಗಿದ್ದು ,ಇದರಲ್ಲಿ ವಿವಿಧ ಧರ್ಮಗಳ ಧರ್ಮ ಗುರುಗಳು ಒಂದೇ ವೇದಿಕೆಯಲ್ಲಿ ಹಾಜರಾಗಿ ತಮ್ಮ ತಮ್ಮ ಧರ್ಮಗಳಿಗೆ ಸೇರಿದ ಧರ್ಮ ಗ್ರಂಥಗಳಲ್ಲಿನ ಪವಿತ್ರ ಸೂಕ್ತಿಗಳನ್ನು ಪಠಿಸುವುದರ ಮೂಲಕ ಪುಟ್ಟ ಮಗುವನ್ನು ಆಶೀರ್ವದಿಸಿ ಎಲ್ಲರ ಮೆಚ್ಚುಗೆ ಗೆ ಪಾತ್ರರಾದರು. ಮಸೀದಿಯ ಧರ್ಮಗುರು ಮೌಲಾನಾ ಇರ್ಷಾದ್ ಅಹಮದ್, ತನ್ವೀಕಾ ಫೌಂಡೇಶನ್ ನ ವಿನಯ್ ಜಿ ಗುರೂಜಿ ಹಾಗೂ ಚರ್ಚಿನ ಫಾದರ್, ರಾಬರ್ಟ್ ರವರುಗಳು ಪಾಲ್ಗೊಂಡು ಸರ್ವಧರ್ಮ ಸಮನ್ವಯತೆ ಹಾಗೂ ಧರ್ಮ ಸಹಿಷ್ಣತೆಯ ಸಂದೇಶವ ಸಾರಿದರು.  ಈ ಕಾರ್ಯಕ್ರಮದಲ್ಲಿ ಬಂಧು ಬಳಗದವರು, ಹಿತೈಷಿಗಳು ಸರ್ವಧರ್ಮೀಯರು, ಹಲವು ಗಣ್ಯ ಮಾನ್ಯರು ಉಪಸ್ಥಿತರಿದ್ದು ಮಗುವಿಗೆ ಶುಭ ಹಾರೈಸಿದರು.