Posts

Showing posts from January, 2022

ಯಲ್ಲಾಲಿಂಗೇಶ್ವರ ಪುಷ್ಪಾರೋಣ,ಜಿಲ್ಲಾ ಚುಟುಕು ಸಮ್ಮೇಳನಕ್ಕೆ ತೆರೆ.

Image
ಚುಟುಕು ಸಂಸ್ಕೃತಿ ಬೆಳೆಸುತ್ತದೆ- ಡಾ.ಪೆರ್ಲ.    ಬಸವಕಲ್ಯಾಣ: ಚುಟುಕು ಪಾಸ್ಟ ಪುಡ್ನಂತೆ ಸಿಗುತ್ತದೆ.ಮಾನವೀಯ ಮೌಲ್ಯಗಳ ಪ್ರತಿಪಾದನೆ ಮಾಡುತ್ತಿವೆ. ಹೀಗಾಗಿ ಸುಧೀರ್ಘ ಪರಂಪರೆ ಹೊಂದಿದಂತೆ ಜಿಲ್ಲೆಯಲ್ಲಿ ಚುಟುಕು ಸಾಹಿತ್ಯ ಬೆಳೆಸಬೇಕಾಗಿದೆ. ಚುಟುಕ ಅಧ್ಯಯನ ಮಾಡಬೇಕು, ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಲು ಚುಟುಕು ಮಾದರಿ ಆ ಮೂಲಕ ನಮ್ಮ ಸಂಸ್ಕ್ರತಿ ಬೆಳೆಸಬೇಕಾಗಿದೆಯೆಂದು ಸಾಹಿತಿ ,ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಡಾ.ಸದಾನಂದ ಪೆರ್ಲ ನುಡಿದರು  ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಬೀದರ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡ ಪ್ರಥಮ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಸಮಾರೋಪ ಭಾಷಣ ಮಾಡಿದ ಅವರು ಚುಟುಕು ಸಾಹಿತ್ಯ ಮನೆಯಲ್ಲಿ ಇಡಬೇಕೆಂದರು.ಪೂಜ್ಯ ಸದಾನಂದ ಅಪ್ಪಗಳು ಶಿವಲಿಂಗೇಶ್ವರ ಮಠ ಸಸ್ತಾಪೂರ,ಪೂಜ್ಯ ಪಂಚಾಕ್ಷರಿ ಸ್ವಾಮೀಜಿ ಉರಿ ಲಿಂಗ ಪೆದ್ದಿಮಠ,ಹೊಳಿ ಭಾಸ್ಕಿಯ ಪೂಜ್ಯ ಹಣಮಂತ ಮಹಾರಾಜರು,ಪೂಜ್ಯಮಹಾದೇವಿ ತಾಯಿ ಶರಣೆ ಸಾನಿಧ್ಯ ವಹಿಸಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಸುರೇಶ ಬಡಿಗೇರ,ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ,ವಿಕಾಸ್ ಅಕಾಡೆಮಿಯ ಜಿಲ್ಲಾ ಸಂಚಾಲಕ ರೇವಣ್ಣಸಿದ್ಧಪ್ಪಾ ಜಲಾದೆ, ಪುರಸಭೆ ಅಧ್ಯಕ್ಷೆ ಕಸ್ತೂರಾಬಾಯಿ ಪರಸನೂರ,ರಾಜಮತಿ ಕೊರಾಳೆ,ಎಂ.ಜಿ.ದೇಶ ಪಾಂಡೆ,ಡಾ.ಜಯದೇವಿ ಗಾಯಕವಾಡ ಸಿದ್ರಾಮಪ್ಪ ಗುದಗೆ, ಕಚುಸಾಪ ಜಿಲ್ಲಾಧ್ಯಕ್ಷ ಸಂಗಮೇಶ ಜವಾದಿ ವೇದಿಕೆಯಲ್ಲಿದರು. ಯಲ...

ಯಶಸ್ವಿಯಾಗಿ ನಡೆದ ಪುಸ್ತಕ ಓದು - ಸಂವಾದ ಸರಣಿ ೦೨ ಕಾರ್ಯಕ್ರಮ - ವಿಚಾರ ಮಂಟಪ ಸಾಹಿತ್ಯ ಬಳಗ.

Image
ದಿನಾಂಕ : ೩೦. ೦೧. ೨೦೨೨ ವಿಚಾರ ಮಂಟಪ ಸಾಹಿತ್ಯ ಬಳಗ, ಕರುನಾಡ ಸಾಹಿತ್ಯ ಪರಿಷತ್ತು, ಸ್ಪಂದನಸಿರಿ ಸಾಹಿತ್ಯ ವೇದಿಕೆ ಮತ್ತು ತನುಶ್ರೀ ಪ್ರಕಾಶನ ಸಂಸ್ಥೆ ಇವರ ಜಂಟಿ ಸಹಯೋಗದಲ್ಲಿ ಆನ್ ಲೈನ್ ಗೂಗಲ್ ಮೀಟ್ ಮೂಲಕ  ಪುಸ್ತಕ ಓದು ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ರಾಜ್ ಕುಮಾರ್ ವಿ. ಕೋಲಾರ ಇವರು ಸಂವಿಧಾನದ ಪ್ರಸ್ತಾವನೆಯನ್ನು ಓದುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮತ್ತು ರಾಕೇಶ್ ಎಂ. ಶಿಕ್ಷಕರು, ಬೆಂಗಳೂರು ಇವರು ಪುಸ್ತಕ ಓದು ಸಂವಾದ ಸರಣಿ ೦೧ ಕಾರ್ಯಕ್ರಮದ ಮುಖ್ಯಾಂಶಗಳನ್ನು, ಪುಸ್ತಕ ಓದಿನ ಮಹತ್ವ, ಪುಸ್ತಕ ಓದಿಗೆ ಪ್ರೇರೇಪಿಸುವ ಇಂತಹಾ ಕಾರ್ಯಕ್ರಮಗಳ ಮಹತ್ವ ಇತ್ಯಾದಿ ವಿಚಾರಗಳನ್ನು ವಿಷದಪಡಿಸಿದರು. ಶ್ರೀ ಶಿವಮೂರ್ತಿ ಕೋಡಿಹಳ್ಳಿ ಅವರು ಕಾರ್ಯಕ್ರಮದ ನಿರೂಪಣೆ ಮತ್ತು ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.  ಕಾರ್ಯಕ್ರಮದಲ್ಲಿ ಶ್ರೀಕುವೆಂಪುರವರ ವಿಚಾರ ಕ್ರಾಂತಿಗೆ ಆಹ್ವಾನ ಕೃತಿಯನ್ನು ಚರ್ಚೆಗೆ ಆಯ್ದುಕೊಂಡು ಕೃತಿಯ ವಿವಿಧ ಭಾಗಗಳನ್ನು  ಓದಿ ಸಂವಾದಿಸಲಾಯಿತು. ಸಂವಾದದಲ್ಲಿ ರಜನಿಕಾಂತ್ ಎಚ್. ಪಟಗಾರ, ಗೌತಮ್ ಗೌಡ, ಅನನ್ಯ ಎಚ್, ಸೋಮೇಶ್ ಪ್ರಚಂಡಿ, ಅಂಬಿಕ ಬೆಂಗಳೂರು, ವಿಕಾಸ್ ಕನ್ನಸಂದ್ರ, ಛಾಯಾ ಕೆ ಉಪಾಧ್ಯ ಮುಂತಾದವರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿ ಗಳಾಗಿದ್ದ  ಶ್ರೀಮತಿ ಕಲಾವತಿ ಮಧುಸೂದನ ಇವರು ಮಾತನಾಡುತ್ತಾ ಕ...

ಬೀದರ ಜಿಲ್ಲಾ ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ

Image
ಪ್ರಥಮ ಜಿಲ್ಲಾ ಚುಟುಕು ಸಮ್ಮೇಳನ ೨೯-೩೦ ರಂದು ಸಸ್ತಾಪೂರ ಯಲ್ಲಾಲಿಂಗ ಮಠದಲ್ಲಿ. ಹುಮನಾಬಾದ/ಬಸವಕಲ್ಯಾಣ : ಸಸ್ತಾಪೂರದ ಯಲ್ಲಾಲಿಂಗ ಮಠದಲ್ಲಿ ಯಲ್ಲಾಲಿಂಗೇಶ್ವರರ ೩೬ ನೇ ಪುಣ್ಯ ಸ್ಮರಣೆ ಮತ್ತು ಮಹಾದೇವಿತಾಯಿಯವರ೫೭ನೇ ಹುಟ್ಟು ಹಬ್ಬದ ಪ್ರಯುಕ್ತ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಸದ್ಗುರು ಯಲ್ಲಾಲಿಂಗ ಟ್ರಸ್ಟ ಆಶ್ರಯದಲ್ಲಿ ಜಿಲ್ಲಾ ಪ್ರಥಮ ಚುಟುಕು ಸಾ ಹಿತ್ಯ ಸಮ್ಮೇಳನವನ್ನು ಯುವ ಸಾಹಿತಿ,ಚುಟುಕು ಕವಿ ಡಾ.ಉಮೇಶ ಬಾಬು ಮಠದ( ಉಬಾಮ)  ಅವರ ಸವಾಧ್ಯಕ್ಷತೆಯಲ್ಲಿ ಜರುಗುವದೆಂದು ಸಾಹಿತಿ, ಸಂಯೋಜಕ ಡಾ.ಗವಿಸಿದ್ಧಪ್ಪ ಪಾಟೀಲ ಮತ್ತು ಜಿಲ್ಲಾ ಕಚುಸಾಪ ಅಧ್ಯಕ್ಷ ಸಂಗಮೇಶ ಜವಾದಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಸರಳ ಸಮಾರಂಭ ಏರ್ಪಡಿಸಿ ಸಾಹಿತ್ಯಾಸಕ್ತರಿಗೆ,ಭಕ್ತಾದಿಗಳಿಗೆ ನಿರಾಸೆ ಆಗದೇ ರೀತಿಯಲ್ಲಿ ನಿಯಮ ಪಾಲಿಸಲಾಗುವದೆಂದು ಹೇಳಿದ್ದಾರೆ.  ಮೆರವಣಿಗೆ, ಸಮ್ಮೇಳನದ ಉದ್ಘಾಟನೆ,ಸಾಹಿತ್ಯ ಗೋಷ್ಠಿ,ಚುಟುಕು ಗೋಷ್ಠಿ, ಸಂವಾದ,ವಿಶೇಷ ಸನ್ಮಾನ,ವಿವಿಧ ಪ್ರಶಸ್ತಿ ಪ್ರದಾನ ಸಮಾರೋಪ ಸಮಾರಂಭ ಜರುಗಲಿದೆಯೆಂದು ತಿಳಿಸಿದ್ದಾರೆ. ಸಮ್ಮೇಳನಾಧ್ಯಕ್ಷ ಡಾ.ಉಬಾಮ ಪರಿಚಯ. ಉಬಾಮ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಉಮೇಶ ಬಾಬು ಮಠದ ಅವರು ಬಳ್ಳಾರಿ ಜಿಲ್ಲೆಯ ಕೂಡ್ಲಿಗೆ ತಾಲೂಕಿನ ಟಿ.ಕಲ್ಲಹಳ್ಳಿಯ ಬಸಯ್ಯ ಮತ್ತು ಏಕಾಂತಮ್ಮರ ಮಗನಾಗಿ ೧೯೮೪ ರಲ್ಲಿ ಜನಿಸಿ, ಎಂ.ಎ.,ಬಿಇಡಿ,ಪಿಜಿಸಿಟಿಸಿ,ಪಿಜ...

"ಸಾಹಿತ್ಯ ರತ್ನ" ರಾಜ್ಯಮಟ್ಟದ ಪ್ರಶಸ್ತಿಗೆ ಯುವ ಸಾಹಿತಿ ಕೋಡಿಹಳ್ಳಿ ಬಸವರಾಜಪ್ಪ ಪೂಜಾರ ಆಯ್ಕೆ.

Image
ಗದಗ ಮಾರ್ಚ್ 3: ಡಾ. ವ್ಹಿ.ವ್ಹಿ.ಹಿರೇಮಠ ಮೆಮೋರಿಯಲ್ ಪ್ರತಿಷ್ಠಾನ(ರಿ )ಗದಗ ಇವರಿಗೆ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಜನ್ಮ ದಿನಾಚರಣೆಯ ಪ್ರಯುಕ್ತದಲ್ಲಿ ಯುವ ಸಾಹಿತಿ ಕೋಡಿಹಳ್ಳಿ ಬಸವರಾಜಪ್ಪ ಪೂಜಾರ ಅವರಿಗೆ ರಾಜ್ಯಮಟ್ಟದ "ಸಾಹಿತ್ಯ ರತ್ನ" ಪ್ರಶಸ್ತಿ ನೀಡಲು ಆಯ್ಕೆ ಮಾಡಿದೆ. ಸಾಹಿತ್ಯದಲ್ಲಿ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಜನಪರ ಸೇವೆ ಮಾಡುತ್ತಾ. ಕನ್ನಡದಲ್ಲಿ ಅನೇಕ ಕವಿತೆ, ಲೇಖನಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ, ತಮ್ಮ ಸಂಶೋಧನೆ ಲೇಖನಗಳನ್ನು ಮಂಡಿಸಿದ್ದಾರೆ. ಇವರು ಪ್ರಕಟವಾಗಿರುವ ಕಥೆಗಳು "ಸಾಬಣ್ಣ ಹೊಲ", "ಅಣ್ಣ ಕೊಡಿಸಿದ ಚಪ್ಪಾಳೆಗಳು", "ಅಣ್ಣನ ಹಳೆಬೈಕ್ ರಿಪೇರಿ", ಮತ್ತೆ ವಿವಿಧ ಕಡೆ ಕವಿಗೋಷ್ಠಿಯಲ್ಲಿ ಕವಿಗೋಷ್ಠಿ ಮಾಡಿ. ಕವಿಗೋಷ್ಠಿಯ ತೀರ್ಪುಗಾರರಾಗಿ ಸೇವೆಸಲ್ಲಿಸಿದ್ದಾರೆ. ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಸಾಹಿತ್ಯದಲ್ಲಿ ಕೂಡ ಸೇವೆ ಸಲ್ಲಿಸಿರುವ ಇವರಿಗೆ "ಸಾಹಿತ್ಯ ರತ್ನ" ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತಸದ ಸಂಗತಿಯಾಗಿದೆ. ಮಾರ್ಚ್ 3 ರಂದು ನಡೆಯುವ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರು ಶ್ರೀಮತಿ ವ್ಹಿ. ವ್ಹಿ.ಹಿರೇಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ...

ವಿಚಾರ ಮಂಟಪ ಸುದ್ಧಿ ಪತ್ರಿಕೆ

 ಉದ್ಘಾಟನೆ ದಿನಾಂಕ : ೩೧.೦೧.೨೦೨೨ ಭಾನುವಾರ , ಸಂಜೆ ೦೫.೩೦ ಕ್ಕೆ.