Posts

Showing posts from February, 2023

ಮಕ್ಕಳ ಸಾಹಿತ್ಯ ಪರಿಷತ್ತು ಹೊಸಪೇಟೆ ತಾಲೂಕು ಘಟಕ ಉದ್ಘಾಟನೆ ನೂತನ ಪದಾಧಿಕಾರಿಗಳ ಪದಗ್ರಹಣ.

Image
ದಿನಾಂಕ:19.02.2023 ರಂದು ಹೊಸಪೇಟೆಯ ಗೃಹರಕ್ಷಕ ದಳದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು  ಹೊಸಪೇಟೆ ತಾಲೂಕ ಘಟಕದ ಉದ್ಘಾಟನೆ ಮತ್ತು ನೂತನ ಪದಾಧಿಕಾರಿಗಳ‌ ಪದಗ್ರಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಕ.ರಾ.ಮ.ಸಾ.ಪ.ಜಿಲ್ಲಾ ಅಧ್ಯಕ್ಷರಾದ ಶ್ರೀ ವೆಂಕಟೇಶ್ ಬಡಿಗೇರ ಇವರು ವಹಿಸಿಕೊಂಡಿದ್ದರು. ಉದ್ಘಾಟಕರಾಗಿ ಆಗಮಿಸಿದ್ದ ಡಾ.ಎಸ್.ಶಿವಾನಂದ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತೃತ್ವದಲ್ಲಿ ಅರಳಿದ ಮಕ್ಕಳ ಸಾಹಿತ್ಯದ ಬಗ್ಗೆ ,ಮಕ್ಕಳ ಸಂಸ್ಕಾರ ,ಜ್ಞಾನದ  ಬೆಳವಣಿಗೆ ಮತ್ತು ಸಂರಕ್ಷಣೆ ಯಲ್ಲಿ ಪಾಲಕರ ಪೋಷಕರ ಜವಾಬ್ದಾರಿಯ ಮಹತ್ವದ ಕುರಿತಾಗಿ ಮಾತನಾಡಿದರು. ವಿಶೇಷ ಉಪನ್ಯಾಸ ನೀಡಿದ ಡಾ.ಅಕ್ಕಿ ಬಸವೇಶ್ ರವರು "ಮಕ್ಕಳ ಸಾಹಿತ್ಯ ಬೆಳೆದು ಬಂದ ದಾರಿ" ಹಿನ್ನಲೆಯಲ್ಲಿ ಅತ್ಯುತ್ತಮವಾಗಿ ವಿಷಯ ಮಂಡಿಸಿದರು‌. ಇದೇ ವೇದಿಕೆಯಲ್ಲಿ ಹೊಸಪೇಟೆ ತಾಲೂಕಿನ ಭರತನಾಟ್ಯ,ಸಂಗೀತ,ಮಿಮಿಕ್ರಿ,ಚಿತ್ರಕಲೆ  ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈಯುತ್ತಿರುವ  ಪ್ರತಿಭಾವಂತ   ಮಕ್ಕಳಿಗೆ " 2023 ರ ವಿಜಯನಗರ ಚಿಣ್ಣರ ಸಾಧಕ ಪ್ರಶಸ್ತಿ" ಯನ್ನು  ನೀಡಿ ಗೌರವಿಸಲಾಯಿತು.ಈ ಕಾರ್ಯಕ್ರಮದ ವೇದಿಕೆಯಲ್ಲಿ ಗೃಹ ರಕ್ಷಕ ದಳದ ಘಟಕಾಧಿಕಾರಿ ಶ್ರೀ ಎಸ್.ಎಮ್.ಗಿರೀಶ್,   ಶ್ರೀ.ಡಾ.ದಯಾನಂದ ಕಿನ್ನಾಳ,ತಾ....

ಅರ್ಥಪೂರ್ಣವಾಗಿ ಚಿಟಗುಪ್ಪ ತಾಲೂಕು ಪ್ರಥಮ ಕರ್ನಾಟಕ ಜಾನಪದ ಸಮ್ಮೇಳನ ಆಚರಣೆ.

Image
ಚಿಟಗುಪ್ಪ : ಸಂತ ಶಿರೋಮಣಿ ಮಡಿವಾಳೇಶ್ವರ ಜಾತ್ರಾ ಮಹೋತ್ಸವ ಹಾಗೂ ಚಿಟಗುಪ್ಪ ತಾಲೂಕು ಪ್ರಥಮ ಜಾನಪದ ಸಮ್ಮೇಳನ ಅಂಗವಾಗಿ ಆಯೋಜಿಸಿದ್ದ ಪ್ರತಿಕಾ ಗೋಷ್ಠಿ ಉದ್ದೇಶಿಸಿ ಕಜಾಪ ಜಿಲ್ಲಾಧ್ಯಕ್ಷರಾದ ಡಾ. ಜಗನ್ನಾಥ ಹೆಬ್ಬಾಳೆ ಯವರು ಮಾತನಾಡಿ ಹಳ್ಳಿ ಸೊಗಡಿನ ಜಾನಪದ ಸಂಸ್ಕೃತಿ ಉಳಿಸಲು, ಬೆಳೆಸಲು ಕರ್ನಾಟಕ ಜಾನಪದ ಪರಿಷತ್ತು ಅವಿರತವಾಗಿ ಶ್ರಮಿಸುತ್ತಿದೆ.ಭಾರತ ದೇಶದಲ್ಲೇ ನಮ್ಮ ಕರ್ನಾಟಕದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ. ಕಲೆ, ಸಾಹಿತ್ಯ, ನೃತ್ಯ ,ಡೊಳ್ಳು ಕುಣಿತ, ಕಂಸಾಳೆ, ಕರಡಿ ಮಜಲು, ವೀರಗಾಸೆ, ನಂದಿಕೋಲು ಕುಣಿತ,  ನಾಟಕ ಬಯಲಾಟ, ದೊಡ್ಡಾಟ, ಶ್ರೀ ಕೃಷ್ಣಪಾರಿಜಾತ, ಯಕ್ಷಗಾನ ಮುಂತಾದ ವಿವಿಧ ಪ್ರಕಾರಗಳನ್ನು ನಮ್ಮ ಕನ್ನಡ ಜಾನಪದ ಸಂಸ್ಕೃತಿಯಲ್ಲಿ ಕಾಣಬಹುದು. ಕನ್ನಡ ಜಾನಪದ ಸಂಸ್ಕೃತಿಯು ಒಂದು ಭಾಗವಾದ ಜಾನಪದ ಗೀತೆಗಳು ಅತ್ಯಂತ ವೈವಿಧ್ಯಮಯವಾಗಿ ಕನ್ನಡನಾಡಿನ ವಿವಿಧ ಪ್ರದೇಶಗಳ ಪ್ರಾದೇಶಿಕ ಸೊಗಡುಗಳನ್ನು ನಮ್ಮ ಮುಂದಿನ ಪೀಳಿಗೆಗೆ ಜೋಪಾನ ಮಾಡಿವೆ ಎಂದರೆ ತಪ್ಪಲ್ಲ ಎಂದರು. ಸಮ್ಮೇಳನದ ವಿವರಗಳನ್ನು ನೀಡುತ್ತಾ ಫೆಬ್ರವರಿ 21 ರಂದು ಬೆಳಗ್ಗೆ 8 ಗಂಟೆಗೆ ಪೂರ್ಣಕುಂಭ ದೊಂದಿಗೆ ಸರ್ವಾಧ್ಯಕ್ಷರ ಮೆರವಣಿಗೆ ಅಯ್ಯಪ್ಪಸ್ವಾಮಿ ಮಠದಿಂದ ಮಡಿವಾಳೇಶ್ವರ ಕಲ್ಯಾಣ ಮಂಟಪದವರೆಗೆ ಸಾಗಲಿದೆ. 11-00 ಗಂಟೆಗೆ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದೆ, ಮಧ್ಯಾಹ್ನ 2 -00 ಗಂಟೆಗೆ ಚಿಟಗುಪ್ಪ ತಾಲೂಕು ಜಾನಪದ ಸಾಹಿತ್ಯದ ಕುರಿತ ...

ತುಮಕೂರಿನಲ್ಲಿ ಕವಿಗೋಷ್ಠಿ ಹಾಗೂ ಪುಸ್ತಕ ಓದು ಸಂವಾದ ಕಾರ್ಯಕ್ರಮ.

Image
ಎಲ್ಲರಿಗೂ ನಮಸ್ಕಾರಗಳು, ಇಂದು, ದಿನಾಂಕ 05:02:2023 ಭಾನುವಾರದಂದು ಮಧ್ಯಾಹ್ನ 01:30 ಕ್ಕೆ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ, ಹಾಸನ ಹಾಗೂ ವಿಚಾರ ಮಂಟಪ ಸಾಹಿತ್ಯ ಬಳಗ ಇವರ ಜಂಟಿ ಸಹಯೋಗದಲ್ಲಿ ತುಮಕೂರು ನಗರದ ಶೆಟ್ಟಿಹಳ್ಳಿ ಗೇಟ್ ಬಳಿಯ ರಾಘವೇಂದ್ರ ಸ್ವಾಮಿ ಮಠದ ಹತ್ತಿರವಿರುವ ಪಿ ಐ ಸೆಂಟರ್ ವಿದ್ಯಾವಿಹಾರ ಸಭಾಂಗಣ ಇಲ್ಲಿ ಶ್ರೀಮತಿ ಆಶಾಕಿರಣ್ ರವರ ಅಪರಾಧಿ ನಾನಲ್ಲ ಪುಸ್ತಕದ ಓದು - ಸಂವಾದ, ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ತುಮಕೂರು ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.   ಹೆಚ್ಚು ಆಡಂಬರ, ಅಪವ್ಯಯವಿಲ್ಲದೆ, ವಿಚಾರಪರವಾದ ಓದು - ಸಂವಾದ - ಚಿಂತನೆಗಳ ಮೂಲಕ ಯುವ ಮನಸ್ಸುಗಳಲ್ಲಿ ಸಾಹಿತ್ಯಾಭಿವ್ಯಕ್ತಿಯನ್ನು ಸಾಹಿತ್ಯಾಸಕ್ತಿಯನ್ನು, ಸಮಾಜ ಸೇವಾ ಮನೋಭಾವವನ್ನು  ಬೆಳೆಸುವ ಸದ್ದುದೇಶದಿಂದ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಹಾಗೂ ವಿಚಾರ ಮಂಟಪ ಸಾಹಿತ್ಯ ಬಳಗಗಳು ಜಂಟಿಯಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದು, ಇದರ ಮುಂದುವರೆದ ಭಾಗವಾಗಿ ನಾಳಿನ ಕಾರ್ಯಕ್ರಮವೂ ನಡೆಯಲಿದೆ. ಎಲ್ಲಾ ಸ್ನೇಹಿತರೂ ಸಾಹಿತ್ಯಾಭಿಮಾನಗಳು ಸದ್ವಿಚಾರಗಳನ್ನು ತಿಳಿಯುವ, ಅರಿಯುವ, ತಿಳಿಸಿ ಪಸರಿಸುವ ಸದುದ್ದೇಶದಿಂದ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಮೂಲಕ ಉದಯೋನ್ಮುಖ ಬರಹಗಾರರನ್ನು ಪ್ರೋತ್ಸಾಹಿಸುವ ನಮ್ಮ ಪ್...