Posts

Showing posts from January, 2024

ಜನವರಿ 13ರಂದು ಗೋವಿಂದರಾಜು ಎಂ ಕಲ್ಲೂರು ಇವರ ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಕೃತಿ ಲೋಕಾರ್ಪಣೆ.

Image
*ತುಮಕೂರು :* ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನ  ಸಭಾಂಗಣದಲ್ಲಿ ಜನವರಿ 13ರ (ಶನಿವಾರ) ಸಂಜೆ 4:00 ಗಂಟೆಗೆ ಯುವ ಕಥೆಗಾರ ಗೋವಿಂದರಾಜು ಎಂ ಕಲ್ಲೂರು ಅವರ ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’  ಕತಾಸಂಕಲನ ಲೋಕಾರ್ಪಣೆಗೊಳ್ಳಲಿದೆ. ಕರ್ನಾಟಕ ಲೇಖಕಿಯರ ಸಂಘ, ಜಿಲ್ಲಾಶಾಖೆ ತುಮಕೂರು, ಪ್ರಗತಿಪರ ಸಂಘಟನೆಗಳು ತುಮಕೂರು ಹಾಗೂ ರೂಹು ಪುಸ್ತಕ ಇವರ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.  ಹಿರಿಯ ಲೇಖಕರು, ಕಾರ್ಮಿಕ ಇಲಾಖೆಯ ವಿಶ್ರಾಂತ ಅಧಿಕಾರಿಗಳೂ ಆದ ತುಂಬಾಡಿ ರಾಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.  ಹಿರಿಯ ಲೇಖಕರಾದ ಅಗ್ರಹಾರ ಕೃಷ್ಣಮೂರ್ತಿ ಪುಸ್ತಕ ಅನಾವರಣಗೊಳಿಸಲಿದ್ದಾರೆ.  ನಿತ್ಯಾನಂದ ಬಿ ಶೆಟ್ಟಿ,  ಡಾ. ರವಿಕುಮಾರ್ ನೀಹ, ಕೇಶವಮಳಗಿ, ಮಲ್ಲಿಕಾ ಬಸವರಾಜು ಹಾಗೂ ಸಾಹಿತ್ಯಾಸಕ್ತರು ಭಾಗವಹಿಸಲಿದ್ದಾರೆ.