Posts

Showing posts from April, 2023

ಭಾಷೆಯಲ್ಲಿ ಗಟ್ಟಿತನವಿದ್ದರೆ ಕಾವ್ಯ ಗಟ್ಟಿಯಾಗುತ್ತದೆ ; ಲಲಿತಾ ಸಿದ್ಧಬಸವಯ್ಯ ಅಭಿಮತ.

Image
ತುಮಕೂರು: ಕವಿ ತನ್ನ ಓದುಗರನ್ನು ಮನಸ್ಸಿನಲ್ಲಿಟ್ಟುಕೊಂಡು ಬರೆಯಬೇಕು. ಭಾಷೆಯಲ್ಲಿ ಗಟ್ಟಿತನವಿದ್ದರೆ ಮಾತ್ರ ಕಾವ್ಯ ಗಟ್ಟಿಯಾಗುತ್ತದೆ ಎಂದು ಕವಯತ್ರಿ ಲಲಿತಾ ಸಿದ್ಧಬಸವಯ್ಯ ಅಭಿಪ್ರಾಯಪಟ್ಟರು.           ನಗರದ ಓಶೋ ಧ್ಯಾನ ಕೇಂದ್ರದಲ್ಲಿ ಭಾನುವಾರ ಕರ್ನಾಟಕ ಲೇಖಕಿಯರ ಸಂಘ ತುಮಕೂರು ಹಾಗೂ ಸಾಕ್ಷಿ ಪ್ರಕಾಶನ ಇವರ ಸಹಯೋಗದಲ್ಲಿ ನಡೆದ ಕವಯತ್ರಿ ಲಲಿತಾ ಸಿದ್ಧಬಸವಯ್ಯ ಅವರೊಂದಿಗೆ ಸಂವಾದ ಹಾಗೂ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕವಿ ಅನುಭವ ಪ್ರಾಮಾಣಿಕನಾಗಿದ್ದರೆ ಅವನಿಗೆ ಪದಗಳನ್ನು ಹುಡುಕುವ ಕಷ್ಟವೇ ಇರುವುದಿಲ್ಲ. ಪದಗಳು ತಾವೇ ಕವಿಯನ್ನು ಹುಡುಕಿಕೊಳ್ಳುತ್ತವೆ.  ಕವಿ ಹೆಚ್ಚು ಹೆಚ್ಚು ಓದುವುದರಿಂದ ಪದ ಸಂಪತ್ತು ಬೆಳೆಯುತ್ತದೆ. ನಮ್ಮ ಸುತ್ತಮುತ್ತ ಇದ್ದ ಮಹಿಳೆಯರೆಲ್ಲ ಗಟ್ಟಿಗಿತ್ತಿಯರೇ, ದಿಟ್ಟರಲ್ಲಿ ದಿಟ್ಡೆಯಾದವಳು ನನ್ನ ತಾಯಿ. ಇವರ್ಯಾರು ಸ್ತ್ರೀವಾದವನ್ನು ಮಾತನಾಡಲಿಲ್ಲ, ಆದರೆ ಸ್ತ್ರೀವಾದವನ್ನು ಜೀವಿಸಿದ್ದರು. ಅವರೇ ನನ್ನ ಕಾವ್ಯಕ್ಕೆ ಸ್ಪೂರ್ತಿ ಎಂದರು. ಕಾರ್ಯಕ್ರಮದ ಸಂಚಾಲಕಿ ಡಾ. ಆಶಾರಾಣಿ ಬಗ್ಗನಡು ಮಾತನಾಡಿ ಮಾತು ಮಾರೆಯಾಗುತ್ತಿರುವ ದುರಿತ ಕಾಲದಲ್ಲಿ ನಮ್ಮನಮ್ಮ ಚಿಂತನೆಗಳನ್ನು ಗಟ್ಟಿಗೊಳಿಸಿಕೊಳ್ಳಲು ಸಂವಾದಗಳು ಅತ್ಯಂತ ಅಗತ್ಯ. ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಅತ್ಯಂತ ಮಹತ್ವದ ಸ್ಥಾನವನ್ನು ಹೊಂದಿರುವ, ಲಲಿತಾ ಸಿದ್ಧಬಸವಯ್ಯನವರು ತಮ್ಮ...

ಕ.ರಾ.ಸ್ಪಂದನ ಸಿರಿ ವೇದಿಕೆಯ ಬೆಳಗಾವಿ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಕಾರ್ಯಕ್ರಮ.

Image
ಕ.ರಾ.ಸ್ಪಂದನ ಸಿರಿ ವೇದಿಕೆಯ ಬೆಳಗಾವಿ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಕಾರ್ಯಕ್ರಮವನ್ನು ಬೆಳಗಾವಿ ಕಾರಂಜಿ ಮಠದ ಶ್ರೀ ಗುರುಸಿದ್ಧ ಮಹಾಸ್ವಾಮೀಜಿಗಳ ಸರ್ವಾಧ್ಯಕ್ಷತೆಯಲ್ಲಿ ತಮ್ಮ ಸಹೃದಯತೆಯ ಸರಳ ಸಹಜ ಸತ್ವಪೂರ್ಣ ನುಡಿ, ಆಶೀರ್ವಚನಗಳಿಂದ ಸುಸಂಪನ್ನಗೊಳಿಸಿದರು. ಮಾನವೀಯ ಮೌಲ್ಯಗಳನ್ನು ಸಕಾರಗೊಳಿಸುವಲ್ಲಿ ಮುನ್ನಡಿಯುತ್ತಿರುವ ಸ್ಪಂದನ ಸಿರಿ ವೇದಿಕೆಯ ಸೋದರಿ ಕಲಾವತಿಮಧುಸೂದನರವರ ಹುಟ್ಟು ಹಾಕಿರುವ ಸಂಸ್ಥೆ ಯಾವುದೇ ಉಪನ್ಯಾಸ ಭಾಷಣದ ವೇದಿಕೆಯಲ್ಲ.. ಸಾಮಾಜಿಕ ಸ್ಪಂದನೆಯ ನಿಟ್ಟಿನಲ್ಲಿ ಕೆಲಸ ಮಾಡುವ ಸಂಸ್ಥೆಯಾಗಿದ್ದು,ಈ ಸಂಸ್ಥೆಯ ಆಶಯದಂತೆ ಬೆಳಗಾವಿ ಜಿಲ್ಲಾ ಸಮಿತಿಯು ಕಾರ್ಯಪ್ರವೃತ್ತವಾಗುವ ಮೂಲಕ ವೃದ್ಧರ ಅಸಹಾಯಕರ ಶೋಷಿತರ ಧ್ವನಿಯಾಗಿ ಹಾಗೂ ಮಕ್ಕಳು ಮತ್ತು ಸಮಾಜದ ಶ್ರೇಯೋಭಿವೃದ್ದಿಗಾಗಿ ಶ್ರಮಿಸಬೇಕೆಂದರು. ಮತ್ತು ಸುಪ್ರಸಿದ್ಧ ಗಾಯಕರು ಮತ್ತು ಆಕಾಶವಾಣಿ ಕಲಾವಿದರೂ ಆಗಿರುವ ಡಾ.ಶ್ರೀರಂಗ ಜೋಷಿಯವರನ್ನು ಬೆಳಗಾವಿ ಜಿಲ್ಲಾಧ್ಯಕ್ಷರಾಗಿ  ಪ್ರಮಾಣ ಪತ್ರ ಪ್ರದಾನಮಾಡಿ ಸನ್ಮಾನಿಸಿ ಗೌರವಿಸಲಾಯಿತು.  ಪ್ರಮಾಣ ವಚನ ಸ್ವೀಕರಿಸಿದ ಡಾ.ಶ್ರೀರಂಗ ಜೋಶಿಯವರು ತಮ್ಮ ಸದಾಶಯವನ್ನು ಹಂಚಿಕೊಂಡರು. ಹಾಗೂ ನೂತನವಾಗಿ ರಚಿತವಾಗಿರುವ ಸಮಿತಿಯ ಎಲ್ಲಾ ಪದಾಧಿಕಾರಿಗಳು ಪ್ರಮಾಣ ಪತ್ರ ಸ್ವೀಕರಿಸಿದರು. ರಾಜ್ಯಧ್ಯಕ್ಷೆ ಕಲಾವತಿಮಧುಸೂದನ ಸಂಸ್ಥೆಯ ಆಶಯವನ್ನು ವ್ಯಕ್ತಪಡಿಸಿ ಸ್ವಾಮೀ ಜಿಗಳಿಗೆ ಪ್ರಣಾಮಗಳನ್ನು ಸಲ್ಲಿಸಿ ಗೌರವವ...

ಶ್ರೀ ರಾಮಮಂದಿರ, ಜನ್ನಾಪುರದಲ್ಲಿ ಸಂಭ್ರಮದ ಮಹಿಳಾ ದಿನಾಚರಣೆ.

Image
ಶ್ರೀಶಾ ಕಲಾವೇದಿಕೆ ಹಾಗೂ ಶ್ರೀ ಸೀತಾರಾಮಾಂಜನೇಯ ಭಜನಾ ಮಂಡಳಿ ವತಿಯಿಂದ ಶ್ರೀ ರಾಮಮಂದಿರ, ಜನ್ನಾಪುರ, ಭದ್ರಾವತಿ ಇಲ್ಲಿ ಶ್ರೀರಾಮನವಮಿ ಹಾಗೂ ಮಹಿಳಾ ದಿನಾಚರಣೆ ಆಯೋಜಿಸಲಾಗಿತ್ತು. ಶ್ರೀರಾಮಸಂಕೀರ್ತನೆಯನ್ನು ಭಜನಾ ಮಂಡಳಿಯ ಸದಸ್ಯೆಯರು ಗುರುಗಳಾದ ಶ್ರೀ ಹೆಚ್.ಸಿ.ನಾರಾಯಣಶೆಟ್ಟರು ಇವರ ನೇತೃತ್ವದಲ್ಲಿ ಬಹಳ ಚೆನ್ನಾಗಿ ನಡೆಸಿದರು. ನಂತರ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಶ್ರೀಮತಿ ಮಂಜುಳಾ ಪ್ರಾರ್ಥನೆ ಮಾಡಿದರೆ ಶ್ರೀಮತಿ ವನಿತಾ ಎಲ್ಲರನ್ನೂ ಸ್ವಾಗತಿಸಿದರು‌. ಮಹಿಳೆಯರು ಮತ್ತು ಮಕ್ಕಳಿಗೆ  ಬಾಲ್ ಎಸೆಯುವುದು, ಮ್ಯೂಸಿಕಲ್ ಛೇರ್, ಜ್ಞಾಪಕ ಶಕ್ತಿ, ಮೇಣದಬತ್ತಿ ಹಚ್ಚುವುದು, ಪಿಕ್ ಅಂಡ್ ಆಕ್ಟ್ ಆಟಗಳನ್ನು ಆಡಿಸಲಾಯಿತು.  ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಐದರಿಂದ ಎಂಬತ್ತು ವಯಸ್ಸಿನ ಮಕ್ಕಳು, ಮಹಿಳೆಯರು ಎಲ್ಲಾ ಆಟಗಳಲ್ಲಿ, ಹಾಡು, ನೃತ್ಯಗಳಲ್ಲಿ ಅತ್ಯುತ್ಸಾಹದಿಂದ ಸಂತೋಷದಿಂದ ಪಾಲ್ಗೊಂಡಿದ್ದು ಎಲ್ಲರಲ್ಲೂ ಹರ್ಷ ತಂದಿತು... ಹಾಗೆಯೇ ಇನ್ನೂ ಮುಂದಿನ ದಿನಗಳಲ್ಲಿ ಹೀಗೆಯೇ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕುರಿತು ಎಲ್ಲರಿಂದಲೂ ಅಭಿಪ್ರಾಯ ಬಂದಿದ್ದು , ವಿವಿಧ ರೀತಿಯ ಸೇವಾ ಕಾರ್ಯಗಳನ್ನು  ಆಯೋಜನೆ ಮಾಡುವ ಆಲೋಚನೆ ಮಾಡಲು ಉತ್ಸಾಹ ಬಂದಂತಾಯಿತು.   ಕಾರ್ಯಕ್ರಮವು ಸಂಭ್ರಮದಿಂದ ನಡೆದಿರುವುದಕ್ಕೆ  ಶ್ರೀಮತಿ ಭಾರತಿ ಜಯರಾಮ್ ಎಲ್ಲರಿಗೂ ಧನ್ಯವಾದಗಳನ್ನು ಅರ್...